ADVERTISEMENT

ವಾಚಕರ ವಾಣಿ: ಸಹಬಾಳ್ವೆಗೆ ಯಾವುದು ಮಾನದಂಡ?

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 19:30 IST
Last Updated 18 ಮಾರ್ಚ್ 2021, 19:30 IST

ಅಂತರ್ಜಾತಿ ವಿವಾಹ ತಡೆಗೆ ಮಾತೃ ಮಂಡಳಿ ರಚಿಸಬೇಕೆಂದು ಪೇಜಾವರ ಮಠಾಧೀಶರು ಹೇಳಿದ್ದಾರೆ. ವಿವಾಹ ಎನ್ನುವುದು ನಿಜಕ್ಕೂ ಜಾತಿಗೆ ಸಂಬಂಧಿಸಿದ್ದೇ? ಜಾತಿ, ಕುಲ, ನಕ್ಷತ್ರ, ಧರ್ಮ, ಗೋತ್ರ ಎನ್ನುವುದು ಪರಸ್ಪರ ವ್ಯಕ್ತಿಗಳಲ್ಲಿ, ಸಂಗಾತಿಗಳಲ್ಲಿ ಪ್ರೀತಿ, ಸೌಹಾರ್ದ, ಕರುಣೆ, ಅನುಕಂಪ ಹಾಗೂ ಮೈತ್ರಿಯನ್ನು ಬೆಳೆಸುತ್ತಿದೆಯೇ? ಎಲ್ಲಾ ವಿಧಿ ವಿಧಾನಗಳನ್ನು, ಜಾತಿ ಧರ್ಮಗಳನ್ನು ಅನುಸರಿಸಿ ಮದುವೆ ಮಾಡಿದ ದಂಪತಿಗಳು ನಿಜಕ್ಕೂ ಸಂತೋಷವಾಗಿ, ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆಯೇ? ಮಾನಸಿಕ, ದೈಹಿಕ, ಭಾವನಾತ್ಮಕ ನೋವುಗಳನ್ನು ತಿಂದುಂಡು, ಕುಟುಂಬದ ಮರ್ಯಾದೆ ಅಂತಲೋ ವ್ಯಕ್ತಿಘನತೆ ಅಂತಲೋ ಜಾತಿ, ಧರ್ಮ, ಸಂಸ್ಕಾರ, ನಿಂದೆಗಳಿಗೆ ಹೆದರಿಯೋ ಸತ್ತವರೆಷ್ಟೋ ಸತ್ತಂತೆ ಬದುಕುತ್ತಿರುವವರೆಷ್ಟೋ?! ಮದುವೆ ಎಂಬುದು ಕೇವಲ ಸಂತಾನೋತ್ಪತ್ತಿ ನಿಮಿತ್ತವೇ, ಜಾತಿ ನಿಮಿತ್ತವೇ?

ಬಹುತ್ವವುಳ್ಳ ದೇಶದಲ್ಲಿ ತಮ್ಮ ಸಂಗಾತಿಯನ್ನು ಆರಿಸಿಕೊಳ್ಳುವ ಆಯ್ಕೆಯನ್ನು ಎಲ್ಲರಿಗೂ ಕೊಟ್ಟು, ಎಲ್ಲರೂ ಒಡಗೂಡಿ ಬದುಕುವಂತೆ ಮಾಡಬೇಕಾಗಿದೆ. ಪ್ರತಿಯೊಬ್ಬರೂ ಪ್ರತಿಯೊಬ್ಬರನ್ನೂ ಗೌರವಿಸುತ್ತ, ಪ್ರೀತಿಸುತ್ತಾ ಸ್ವತಂತ್ರವಾಗಿ, ಸಂತೋಷವಾಗಿ ಬದುಕಲು ಅವಕಾಶ ಕಲ್ಪಿಸಬೇಕಾಗಿದೆ.

-ಜ್ಯೋತಿ ಭಾಸ್ಕರ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.