ADVERTISEMENT

ವಾಚಕರ ವಾಣಿ: ಭರವಸೆ ಬೇಡ, ಅನುಷ್ಠಾನ ಬೇಕು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 16:48 IST
Last Updated 18 ಸೆಪ್ಟೆಂಬರ್ 2020, 16:48 IST

ಕಲ್ಯಾಣ ಕರ್ನಾಟಕ ದಿನವನ್ನು ಇತ್ತೀಚೆಗಷ್ಟೇ ಆಚರಿಸಿದೆವು. ಹೈದರಾಬಾದ್‌ ಕರ್ನಾಟಕ ಎಂಬ ಹೆಸರಿಗೆ ಬದಲಾಗಿ ಕಲ್ಯಾಣ ಕರ್ನಾಟಕ ಎಂಬ ಹೆಸರಿನ ಬಳಕೆ ಕಳೆದ ವರ್ಷದಿಂದ ಪ್ರಾರಂಭವಾಗಿದೆ. ಈ ಹೆಸರು ಬದಲಾವಣೆಗೆ ವಿಶೇಷ ಗಮನ ನೀಡಿದ್ದು ಅಭಿವೃದ್ಧಿಗೆ ಒತ್ತು ಕೊಡುವ ಸಲುವಾಗಿಯೇ ವಿನಾ ಕೇವಲ ಆಚರಣೆ ಮಾಡುವುದಕ್ಕಲ್ಲ. ಮುಂದೆ ಆಚರಣೆಯಷ್ಟೇ ಉಳಿದು ನಿಜವಾದ ಆಶಯ ಮರೆಯಾಗಬಹುದು ಎಂಬ ಆತಂಕ ಕಾಡುತ್ತದೆ.

ಶಿಕ್ಷಣ, ಪೌಷ್ಟಿಕತೆ, ಉದ್ಯೋಗ, ಮೂಲಸೌಕರ್ಯ, ಮಾನವ ಅಭಿವೃದ್ಧಿ... ಹೀಗೆ ಎಲ್ಲದರಲ್ಲೂ ಹೆಚ್ಚು ಕಡಿಮೆ ಈ ವ್ಯಾಪ್ತಿಯ ಜಿಲ್ಲೆಗಳ ಸ್ಥಾನ ಕೊನೆಯಿಂದ ಪ್ರಥಮ. ನಮಗೆ ಭರವಸೆ ಬೇಡ, ಅನುಷ್ಠಾನ ಬೇಕು. ನಿಜವಾಗಿ ಅಲ್ಲಿ ಅಂದುಕೊಂಡಂತೆ ಅಭಿವೃದ್ಧಿ ಆಗದ ಹೊರತು ಕಲ್ಯಾಣ ಎಂಬುದು ಹೆಸರಿಗೆ ಮಾತ್ರ ಸೀಮಿತವಾಗುತ್ತದೆ.

ಆನಂದ, ಸಿಂಧನೂರು, ರಾಯಚೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.