ADVERTISEMENT

ಗಾದೆಗಳ ವಾಚ್ಯಾರ್ಥದ ಅರ್ಥೈಸುವಿಕೆ ಸಲ್ಲ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 18:23 IST
Last Updated 1 ಸೆಪ್ಟೆಂಬರ್ 2019, 18:23 IST

ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಸಭೆಯೊಂದರಲ್ಲಿ ಮಾತನಾಡುತ್ತ ‘ಕುಣೀಲಾರದ ಸೂಳೆ ನೆಲ ಡೊಂಕೆಂದಳು’ ಎಂದು ಹೇಳಿರುವುದಕ್ಕೆ ಏನೇನೋ ಅರ್ಥ ಕಲ್ಪಿಸಿ ಕೆಲವರು ಮಾತನಾಡಿದ್ದಾರೆ. ಅದೊಂದು
ಗಾದೆ ಮಾತಾಗಿದ್ದು, ಕನ್ನಡ ಭಾಷೆಯಲ್ಲಿ ಗಾದೆಗಳು ಅಸಂಖ್ಯವಾಗಿವೆ.

ಆ ಗಾದೆಗಳು ನಮ್ಮ ಜನಜೀವನದ ಪ್ರತೀಕಗಳಾಗಿವೆ. ಸಿದ್ದರಾಮಯ್ಯ ಹೇಳಿದ ಗಾದೆ ‘ಕೈಲಾಗದವನು ಮೈ ಪರಚಿಕೊಂಡ’ ಎಂಬ ಗಾದೆಯನ್ನು ನೆನಪಿಸುತ್ತದೆ. ಗಾದೆಗಳನ್ನು ನಾವು ಕೇವಲ ವಾಚ್ಯಾರ್ಥದ ನೆಲೆಯಲ್ಲಿ ನೋಡುವುದು ತಪ್ಪು. ಅವು ಧ್ವನಿಸುವುದೇನನ್ನು ಎಂಬುದನ್ನಷ್ಟೇ ನಾವು ನೋಡಬೇಕು.

ಹೊರೆಯಾಲ ದೊರೆಸ್ವಾಮಿ, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.