ಕರ್ನಾಟಕ ನಾಟಕ ಅಕಾಡೆಮಿಯು ಈ ಹಿಂದಿನ ಪದಾಧಿಕಾರಿಗಳ ಅವಧಿಯಲ್ಲಿ ಪ್ರಕಟಿಸಿದ್ದ ಪ್ರಶಸ್ತಿ ಪುರಸ್ಕೃತರ ಆಯ್ಕೆ ಪಟ್ಟಿಯನ್ನು ರದ್ದು ಮಾಡಲಿದೆ ಎಂಬ ಸುದ್ದಿಯು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈ ಪಟ್ಟಿಯನ್ನು ಪರಿಷ್ಕರಿಸುವ ಅಥವಾ ಕೈಬಿಡುವ ನಿರ್ಧಾರವು ಅಕಾಡೆಮಿಯ ಘನತೆಯನ್ನು ಗಾಸಿಗೊಳಿಸುತ್ತದೆ, ಕನ್ನಡದ ಸಾಂಸ್ಕೃತಿಕ ನಡೆ ಲಯ ತಪ್ಪುತ್ತದೆ. ಪ್ರಶಸ್ತಿಗೆ ಆಯ್ಕೆಯಾಗಿರುವ ಕಲಾವಿದರ ಮನಸ್ಸನ್ನು ನೋಯಿಸುವುದು, ಅವಮಾನಿಸುವುದು ತರವಲ್ಲ.
ಗಿನ ಅಧ್ಯಕ್ಷರು ಮತ್ತು ಸದಸ್ಯರು ಹಿಂದಿನ ಪಟ್ಟಿಯನ್ನೇ ಮಾನ್ಯ ಮಾಡಿ, ಅಕಾಡೆಮಿಯ ಘನತೆಯನ್ನು ಹೆಚ್ಚಿಸುತ್ತಾರೆ ಎಂಬ ನಂಬಿಕೆ ಹುಸಿಯಾಗದಿರಲಿ.
-ನಟರಾಜ್ ಹೊನ್ನವಳ್ಳಿ,ತುಮಕೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.