ADVERTISEMENT

ವಾಚಕರ ವಾಣಿ| ಸೂಕ್ಷ್ಮ ವಿಚಾರಗಳಲ್ಲಿ ರಾಜಕಾರಣ ಸಲ್ಲ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 19:30 IST
Last Updated 1 ಡಿಸೆಂಬರ್ 2022, 19:30 IST

ಮಹಾರಾಷ್ಟ್ರದಿಂದ ಬರುವ ಬಸ್ ಪ್ರಯಾಣಿಕರಿಗೆ ಗಡಿಯಲ್ಲಿ ಗುಲಾಬಿ ಹೂವು ನೀಡಿ ಸ್ವಾಗತ ಕೋರಿದ ಕರ್ನಾಟಕ ಪೊಲೀಸರ ನಡೆ ಶ್ಲಾಘನೀಯ. ಕರ್ನಾಟಕದ ಬಸ್‌ಗಳಿಗೆಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಮಸಿ ಬಳಿಯುವುದು, ಕಲ್ಲು ಎಸೆಯುವುದನ್ನು ಅಲ್ಲಿನ ಕೆಲ ಪುಂಡರು ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಲ್ಲಿನ ಬದಲು ಹೂವು ನೀಡಿ ನಮ್ಮವರು ಸ್ವಾಗತ ನೀಡಿರುವುದು ಕನ್ನಡಿಗರ ಹೃದಯ ವೈಶಾಲ್ಯಕ್ಕೆ ಸಾಕ್ಷಿ. ದೇಶದ ಯಾವುದೇ ಒಬ್ಬ ನಾಗರಿಕ ದೇಶದ ಯಾವುದೇ ರಾಜ್ಯದಲ್ಲಿ ಮುಕ್ತವಾಗಿ ಸಂಚರಿಸುವ, ವಾಸಿಸುವ, ವ್ಯಾಪಾರ ಮಾಡುವ ಸವಲತ್ತನ್ನು ನಮ್ಮ ಸಂವಿಧಾನ ಕೊಟ್ಟಿದೆ.

ಹಿಂದೊಮ್ಮೆ ಶರದ್‌ ಪವಾರ್‌ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆಗ ಅಲ್ಲಿನ ವಿರೋಧ ಪಕ್ಷಗಳು ತಮ್ಮಲ್ಲಿಂದ ಕರ್ನಾಟಕಕ್ಕೆ ವಿದ್ಯುತ್ ಪೂರೈಸುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದವು. ಆಗ ಮುಖ್ಯಮಂತ್ರಿ, ‘ಕರ್ನಾಟಕವೇನು ಪಾಕಿಸ್ತಾನದ ಪ್ರಾಂತ್ಯವಲ್ಲ, ಅದು ನಮ್ಮದೇ ದೇಶದ ಒಂದು ಭಾಗ. ವಿದ್ಯುತ್ ಸರಬರಾಜು ನಿಲ್ಲಿಸುವುದು ಸಾಧ್ಯವಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದರು. ಇಂತಹ ಮನೋಭಾವವನ್ನು ಅಲ್ಲಿ ಈಗ ಪುಂಡಾಟಿಕೆಯಲ್ಲಿ ತೊಡಗಿರುವ ಪಕ್ಷಗಳ ಮುಖಂಡರು ಬೆಳೆಸಿಕೊಳ್ಳಬೇಕು. ಗಡಿವಿವಾದ, ಜಲವಿವಾದದಂತಹ ಸೂಕ್ಷ್ಮ ವಿಚಾರಗಳಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ರಾಜಕಾರಣಿಗಳು ಮಾಡಬಾರದು.

- ಗುರುರಾಜ ಪಾಟೀಲ ನಾದ,ಇಂಡಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.