ADVERTISEMENT

ವಾಚಕರ ವಾಣಿ| ಶುಶ್ರೂಷಕರ ಹುದ್ದೆ ಭರ್ತಿ ಮಾಡಿ, ನಿಜವಾದ ಧೈರ್ಯ ತುಂಬಿ

​ಪ್ರಜಾವಾಣಿ ವಾರ್ತೆ
Published 13 ಮೇ 2020, 14:55 IST
Last Updated 13 ಮೇ 2020, 14:55 IST
ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಶುಶ್ರೂ‌ಷಕರು ಮತ್ತು ಆಶಾ ಕಾರ್ಯಕರ್ತರ ಸಂಗ್ರಹ ಚಿತ್ರ
ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಶುಶ್ರೂ‌ಷಕರು ಮತ್ತು ಆಶಾ ಕಾರ್ಯಕರ್ತರ ಸಂಗ್ರಹ ಚಿತ್ರ    

ಕೊರೊನಾ ಸೋಂಕಿನ ವಿರುದ್ಧ ವೈದ್ಯರು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ನಿರಂತರವಾಗಿ ಹೋರಾಡುತ್ತಿದ್ದಾರೆ. ಗರ್ಭಿಣಿಯಾಗಿದ್ದರೂ ರಜೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸುತ್ತಿರುವ ಮತ್ತು 15 ದಿನಗಳಿಂದ ಮನೆಗೇ ಹೋಗದೆ ಶ್ರಮಿಸುತ್ತಿರುವ ಶುಶ್ರೂಷಕಿಯರಿಗೆ ಖುದ್ದು ಮುಖ್ಯಮಂತ್ರಿಯೇ ಕರೆ ಮಾಡಿ ಧೈರ್ಯ ತುಂಬಿದ್ದು ಶ್ಲಾಘನೀಯ. ಆದರೆ ಕಳೆದ ಮೂರು ವರ್ಷಗಳಿಂದ ಶುಶ್ರೂಷಕಿ ವರ್ಗಕ್ಕೆ ಗುತ್ತಿಗೆ ಪದ್ಧತಿಯನ್ನು ಸರ್ಕಾರವು ಅನುಸರಿಸುತ್ತಿದೆ. ಖಾಲಿ ಇರುವ ಎಲ್ಲಾ ಶುಶ್ರೂಷಕಿ ಹುದ್ದೆಗಳನ್ನು ಭರ್ತಿ ಮಾಡಿದರೆ, ಈ ವರ್ಗಕ್ಕೆ ನಿಜವಾದ ಧೈರ್ಯ ತುಂಬಿದಂತೆ ಆಗುತ್ತದೆ. ಸರ್ಕಾರಿ ಆಸ್ಪತ್ರೆಗೆ ಚೈತನ್ಯವೂ ಸಿಗುತ್ತದೆ.

- ಮಾರುತಿ ಎಂ.,ಬೀಳಗಿ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT