ಉಡುಪಿಯ ಕೃಷ್ಣ ಮಠದ ಗೋಪುರಕ್ಕೆ ಸುವರ್ಣ ಹೊದಿಕೆ ಜೋಡಿಸಲು ಮುಂದಾಗಿರುವ ಸುದ್ದಿ (ಪ್ರ.ವಾ.,ನ. 29) ಓದಿ ದೇವರಿಗೇ ಚಿನ್ನದ ಆಸೆ ಬಂತೇ ಎಂದು ಬೆರಗಾದೆ.
ಕೃಷ್ಣನ ಮಕ್ಕಳು ಓದುವ, ಉಡುಪಿ ಜಿಲ್ಲೆಯ ಅನೇಕ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಸರಿಯಾದ ಕಟ್ಟಡಗಳೂ ಇಲ್ಲ (ಸರ್ಕಾರವು ಆಧ್ಯಾಪಕರನ್ನು ನೇಮಿಸುವುದೂ ಇಲ್ಲ). ಪ್ರಾಥಮಿಕ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳಿಲ್ಲ, ಸಿಬ್ಬಂದಿಯೂ ಇಲ್ಲ.
ಅವನ ಭಕ್ತರಿಗೆ ಆದ್ಯತೆಗಳ ಅರಿವಿಲ್ಲದಿದ್ದರೂ, ಗೋಪುರಕ್ಕಾಗಿ ಬಂಗಾರವನ್ನು ದಾನ ಮಾಡಿದ ಭಕ್ತರಿಗೆ, ‘ನನಗೆ ಚಿನ್ನವನ್ನು ಕೊಡುವುದರ ಬದಲಾಗಿ ಒಂದೊಂದು ಶಾಲೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನೋಡಿಕೊಂಡು ಬನ್ನಿ’ ಎಂದು ಹೇಳುವ ಔದಾರ್ಯ, ಸರ್ವಾಂತರ್ಯಾಮಿ ಹಾಗೂ ಸರ್ವಶಕ್ತನಾದ ಸುಧಾಮಸಖನಿಗೆ ಬರಲಿಲ್ಲವೇನೋ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.