ರಾಜಕಾರಣವೆಂಬ ನೀರು
ಈಗೀಗ ತಿಳಿಯಾಗುತ್ತಲೇ ಇಲ್ಲ
ಹಿಂದೆಲ್ಲ ಕದ್ದುಮುಚ್ಚಿ
ಸಣ್ಣಪುಟ್ಟ ಕಲ್ಲಿಟ್ಟು ಕದಡುತ್ತಿದ್ದರು
ಇಂದು ನೀರೊಳಗೇ ಇಳಿದು
ಕೊಳಚೆ ರಾಡಿ ಎಬ್ಬಿಸುತ್ತಿದ್ದಾರೆ
ತಳಹಿಡಿದಿದ್ದ ಕಸ ಕಡ್ಡಿಗಳು
ಸತ್ತ ಹುಳ ಹುಪ್ಪಟೆಗಳು
ಮೇಲೆ ಬಂದು ತೇಲುತ್ತವೆ
ಮೂಗು ಮುಚ್ಚಿಕೊಳ್ಳುವಷ್ಟು
ಗಬ್ಬು ನಾರುತ್ತವೆ.
-ರೇಚಂಬಳ್ಳಿ ದುಂಡಮಾದಯ್ಯ
ಚಾಮರಾಜನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.