ಕೆರೆಗಳ ಒತ್ತುವರಿ ತೆರವಿಗಾಗಿ ತಮಗೆ ಮನವಿ ಸಲ್ಲಿಸಲು ಬಂದಿದ್ದ ರೈತ ಮಹಿಳೆಯರನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕಟುಮಾತುಗಳಲ್ಲಿ ನಿಂದಿಸಿರುವುದು (ಪ್ರ.ವಾ., ಮೇ 21) ಅಚ್ಚರಿ ಹುಟ್ಟಿಸುವ ಸಂಗತಿಯೇನಲ್ಲ. ಸಚಿವರು ಹೀಗೆ ಮಾತನಾಡಲು ಅವರಿಗೆ ಈಗ ಒದಗಿಬಂದಿರುವ ಅಧಿಕಾರ ಕಾರಣವೇ ಹೊರತು ಇನ್ನೇನೂ ಅಲ್ಲ.
ಸಚಿವರಾಗುವುದಕ್ಕೂ ಮೊದಲು ರೈತರ ಪರವಾಗಿ ವಿಧಾನಸಭೆಯಲ್ಲಿ ಮನಮಿಡಿಯುವಂತೆ ಇವರು ಮಾತನಾಡಿದ್ದರು. ಈಗ, ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿದ ರೈತ ಸಂಘದವರನ್ನು ದೂರ ಕಳುಹಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. ‘ನೆವವು ಏನಾದರೇನು, ಸುಲಿಗೆ ರೈತನದು, ಎಲ್ಲರೂ ಜಿಗಣೆಗಳೇ ಆತನ ನೆತ್ತರಿಗೆ’ ಎಂದು ರಾಷ್ಟ್ರಕವಿ ಕುವೆಂಪು ಎಂದೋ ಹೇಳಿದ ಮಾತುಗಳು ಈಗಲೂ ಪ್ರಸ್ತುತವಾಗಿರುವುದು, ನಮ್ಮ ಅನ್ನದಾತನ ದುರ್ದೈವವೇ ಸರಿ.
-ಮಲ್ಲಿಕಾರ್ಜುನ ಹುಲಗಬಾಳಿ,ಬನಹಟ್ಟಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.