ADVERTISEMENT

ಗಾಂಧೀಜಿ ವಿಶ್ವರತ್ನವೇ ಆಗಿದ್ದಾರೆ!

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 19:30 IST
Last Updated 20 ಜನವರಿ 2020, 19:30 IST

ಮಹಾತ್ಮ ಗಾಂಧಿ ಅವರಿಗೆ ಭಾರತರತ್ನ ನೀಡದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿರುವ
ಸುಪ್ರೀಂ ಕೋರ್ಟ್‌, ಎಲ್ಲ ಔಪಚಾರಿಕ ಬಿರುದುಗಳನ್ನೂ ಮೀರಿದ ಉನ್ನತ ಗೌರವವನ್ನು ಗಾಂಧಿ ಹೊಂದಿದ್ದಾರೆ ಎಂದು ಹೇಳಿರುವುದು (ಪ್ರ.ವಾ., ಜ. 18) ಔಚಿತ್ಯಪೂರ್ಣವಾಗಿದೆ.

ಗಾಂಧೀಜಿ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ, ಅದಕ್ಕೂ ಮೊದಲು ದಕ್ಷಿಣ ಆಫ್ರಿಕಾದಲ್ಲಿ ನಾಗರಿಕ ಹಕ್ಕುಗಳಿಗಾಗಿ ಚಳವಳಿ ನಡೆಸಿ ವಿಶ್ವದ ಗಮನ ಸೆಳೆದವರು. ಭಾರತದಲ್ಲಿ ರೈತರು ಮತ್ತು ಕಾರ್ಮಿಕರ ಪರವಾಗಿ ಚಳವಳಿ ಮಾಡಿದವರು. ಅಹಿಂಸಾತ್ಮಕ ಹೋರಾಟದಿಂದ ಗೆಲುವು ಸಾಧಿಸಬಹುದು ಎಂಬುದನ್ನು ವಿಶ್ವದಲ್ಲೇ ಮೊದಲ ಬಾರಿಗೆ ತೋರಿಸಿಕೊಟ್ಟವರು. ಅವರ ಸರಳತೆಯು ವಿಶ್ವದ ಹಲವು ನಾಯಕರಿಗೆ ಮಾದರಿಯಾಗಿದೆ. ಅವರ ಚಿಂತನೆ, ತತ್ವ, ಆದರ್ಶಗಳನ್ನು ಹಲವು ದೇಶಗಳು ಅಳವಡಿಸಿಕೊಂಡಿವೆ. ಹೀಗಾಗಿ ಗಾಂಧೀಜಿ ‘ವಿಶ್ವರತ್ನ’ವೇ ಆಗಿದ್ದಾರೆ.

-ಸಿ.ಸಿದ್ದರಾಜು ಆಲಕೆರೆ,ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.