ADVERTISEMENT

ಸ್ವಾರಸ್ಯಕರ ಸಂಗತಿಗಳ ಅನಾವರಣ

ಗುಡಿಹಳ್ಳಿ ನಾಗರಾಜ
Published 12 ಏಪ್ರಿಲ್ 2019, 20:30 IST
Last Updated 12 ಏಪ್ರಿಲ್ 2019, 20:30 IST

ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯಲ್ಲಿ ಅಪರೂಪದ ಮತ್ತು ಹಳೆಯ ಚಿತ್ರಗಳನ್ನು ಪ್ರಕಟಿಸಲಾಗುತ್ತಿದೆ.

40–50 ವರ್ಷಗಳ ಹಿಂದಿನ ಚುನಾವಣೆಯ ಕೆಲವು ನೆನಪುಗಳು, ಸ್ವಾರಸ್ಯಕರ ಸಂಗತಿಗಳನ್ನು ಓದುಗರ ಮುಂದಿಡಲಾಗುತ್ತಿದೆ. ಇಂದಿರಾಗಾಂಧಿ ಅವರು ಚಿಕ್ಕಮಗಳೂರು ಕ್ಷೇತ್ರದಿಂದ 1978ರಲ್ಲಿ ಸ್ಪರ್ಧಿಸಿದ್ದಾಗಿನ ಹಲವು ಸ್ವಾರಸ್ಯಕರ ಸಂಗತಿಗಳನ್ನು ಹಿರಿಯ ರಾಜಕಾರಣಿ ಬಿ.ಎ.ಮೊಯಿದ್ದೀನ್‌ ಅವರು ಬರೆದಿರುವ ‘ನನ್ನೊಳಗಿನ ನಾನು’ ಆತ್ಮಕಥೆಯಿಂದ ಹೆಕ್ಕಿ ಬರೆಯಲಾಗಿದೆ. ನೆಹರೂ ಅವರ ಆಪ್ತರನ್ನು ವಿಜಯಪುರ ಕ್ಷೇತ್ರದಿಂದ ಸುಗಂಧಿ ಮುರುಗೆಪ್ಪಣ್ಣನವರ ಪರಾಭವಗೊಳಿಸಿದ ಸಂಗತಿಯೂ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಈ ಘಟನೆಯನ್ನು ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಅವರ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ. ಈ ಹಿಂದಿನ ಚುನಾವಣೆಯ ಅನೇಕ ಸ್ವಾರಸ್ಯಕರ ಸಂಗತಿಗಳು ನಮಗೆ ಜೀವನಚರಿತ್ರೆಗಳು/ಆತ್ಮಕಥೆಗಳಿಂದ ತಿಳಿದುಬರುತ್ತವೆ. ಇವು ನಮ್ಮ ಚುನಾವಣೆಯ ಐತಿಹಾಸಿಕ ಘಟನಾವಳಿಗಳನ್ನು ಕಟ್ಟಿಕೊಡುತ್ತವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.