ADVERTISEMENT

ಬಿಟ್ಟೆನೆಂದರೂ ಬಿಡದೀ ಮಾಯೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 18 ನವೆಂಬರ್ 2019, 17:07 IST
Last Updated 18 ನವೆಂಬರ್ 2019, 17:07 IST
   

ಮನುಷ್ಯನ ಬದುಕನ್ನು ಸ್ಮಾರ್ಟ್ ಆಗಿಸಲು ಬಳಕೆಗೆ ಬಂದ ಮೊಬೈಲ್ ಫೋನ್‌ಗಳು ಮನೋ
ವ್ಯಸನಕ್ಕೆ ದಾರಿ ಮಾಡಿಕೊಡುವ ಆಘಾತಕಾರಿ ಸಂಗತಿಯನ್ನು ‘ಒಳನೋಟ’ (ಪ್ರ.ವಾ., ನ. 17) ತೆರೆದಿಟ್ಟಿದೆ. ಇಂತಹ ಮನೋರೋಗಕ್ಕೆ ಚಿಕಿತ್ಸೆ ನೀಡಲು ಪ್ರತ್ಯೇಕ ಕ್ಲಿನಿಕ್ ಅನ್ನೇ ಆರಂಭಿಸಿರುವುದು ಮತ್ತೊಂದು ಅಚ್ಚರಿ. ಉತ್ತಮ ಆರೋಗ್ಯಕ್ಕೆ ಬೇಕಾದ ಆಹಾರ, ನಿದ್ರೆಯನ್ನು ತ್ಯಜಿಸಿದರೂ ಸರಿಯೇ ಸ್ಮಾರ್ಟ್ ಫೋನ್ ಬಿಡುವುದಿಲ್ಲ ಎಂಬಷ್ಟರ ಮಟ್ಟಿಗೆ ಮೊಬೈಲ್ ಮಾಯೆ ಜನರನ್ನು ಆವರಿಸಿದೆ.

ಕೇವಲ ಮಾತನಾಡಲು, ಸಂದೇಶ ರವಾನಿಸಲು ಇದ್ದ ಮೊಬೈಲ್ ಫೋನ್‌ ಈಗ ಮಾನವ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಕಲಿಯುವ, ನಲಿಯುವ, ಸಮಾಜದ ಮಹತ್ವವನ್ನು ತಿಳಿಯುವ ವಯಸ್ಸಿನಲ್ಲಿ ಮಕ್ಕಳು ಹಾಗೂ ಹದಿಹರೆಯದವರು ಸ್ಮಾರ್ಟ್‌ ಫೋನ್‌ಗಳಲ್ಲಿ ಮುಳುಗಿ ತಮ್ಮ ಅಮೂಲ್ಯ ಸಮಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಪೋಷಕರು ಸ್ವತಃ ಕೈಕಟ್ಟಿ ಕುಳಿತಿದ್ದಾರೆ, ಇಲ್ಲವೇ ತಾವೂ ಅಂತಹ ಗೀಳಿಗೆ ತುತ್ತಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕ್ಲಿನಿಕ್ ಆರಂಭಿಸುವುದು ನಿಷ್ಪ್ರಯೋಜಕ. ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಲು ಪೋಷಕರೇ ವೈದ್ಯರಂತೆ ಕಾರ್ಯ ನಿರ್ವಹಿಸಬೇಕಾಗಿದೆ. ಆ ಕಾರ್ಯ ಆಗಬೇಕಾದರೆ, ಪೋಷಕರು ತಮಗಿರುವ ಮೊಬೈಲ್‌ ಗೀಳಿನಿಂದ ಮೊದಲು ಹೊರಬರಬೇಕು. ಆಗ, ಮಕ್ಕಳಿಗಿರುವ ಮೊಬೈಲ್‌ ಗೀಳನ್ನು ಹಂತಹಂತವಾಗಿ ಕಡಿಮೆ ಮಾಡಲು ಪ್ರಯತ್ನಿಸಬಹುದು

ಯೋಗೇಶ್ ವೈ.ಸಿ., ಮಂಡ್ಯ

ADVERTISEMENT

ಒಳನೋಟ ಲೇಖನಗಳ ಲಿಂಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.