ADVERTISEMENT

ಕಲಿಸಬೇಕಿದೆ ಒಪ್ಪ ಓರಣ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 19:31 IST
Last Updated 28 ಅಕ್ಟೋಬರ್ 2020, 19:31 IST

‘ಸಂಸ್ಕೃತಿ ಕಲಿಸದ ಶಿಕ್ಷಣ!’ದ ಕುರಿತು ಡಾ. ಚೆನ್ನು ಅ. ಹಿರೇಮಠ ಅವರು ಬರೆದಿರುವ ಲೇಖನ ಸಾಂದರ್ಭಿಕವಾಗಿದೆ (ಸಂಗತ, ಅ. 27). ಕೆಲವು ಶಾಲೆಗಳಲ್ಲಿ ‘ಮಾರಲ್ ಸೈನ್ಸ್’ ಎನ್ನುವ ಪಠ್ಯ ವಿಷಯವನ್ನು ಹೆಸರಿಗಷ್ಟೇ ಪರಿಚಯಿಸಿದ್ದಾರೆ. ಶಾಲೆಯ ಶೌಚಾಲಯದ ನಲ್ಲಿ ಕಿತ್ತು ಹಾಕುವುದು, ಶೌಚಾಲಯದ ಬಕೆಟ್ಟಿನಲ್ಲಿ ಮೂತ್ರ ಮಾಡುವುದು, ಕಿಟಕಿಯ ಗಾಜನ್ನು ಒಡೆದು ಹಾಕುವಂತಹ ಕೃತ್ಯಗಳನ್ನು ಮಾಡಿ ಆನಂದಿಸುವ ಮನಃಸ್ಥಿತಿಯ ಮಕ್ಕಳನ್ನು ಒಬ್ಬ ಶಿಕ್ಷಕಿಯಾಗಿ ಶಾಲೆಗಳಲ್ಲಿ ನಾನು ಕಂಡಿದ್ದೇನೆ. ಬಹುಶಃ ಇದಕ್ಕೆಲ್ಲ ಮನೆಯಲ್ಲಿನ ಪರಿಸರ ಕಾರಣವಾಗಬಹುದು. ಸ್ನಾನದ ನಂತರ ಟವೆಲ್‌ ಅನ್ನು ಒಣಗಲು ಹಾಕುವುದು, ಊಟದ ನಂತರ ತಟ್ಟೆಯನ್ನು ತೊಳೆಯಲು ಹಾಕುವಂತಹ ಸಣ್ಣಪುಟ್ಟ ಚಟುವಟಿಕೆಗಳಲ್ಲಿ ಒಪ್ಪ ಓರಣದ ಬಗ್ಗೆ ಮಕ್ಕಳಿಗೆ ಪೋಷಕರು ತಿಳಿಸಬೇಕು.

‘ಸ್ವಚ್ಛತೆಯೇ ದೇವರು’ ಎನ್ನುವ ಉಕ್ತಿಗೆ ಅನುಸಾರವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಅಗತ್ಯ ಇದೆ. ಜೊತೆಗೆ ಪ್ರವಾಸಿ ಸ್ಥಳಗಳನ್ನು ಅಪವಿತ್ರಗೊಳಿಸುವವರಿಗೆ ದಂಡ ವಿಧಿಸುವ ಕಾರ್ಯವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ಟಿ.ಎಸ್.ಪ್ರತಿಭಾ, ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.