ರಾಜ್ಯದ ಎಲ್ಲಾ 65,911 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಮತ್ತು ಫ್ಯಾನ್ಗಳನ್ನು ಒದಗಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನಿರ್ದೇಶನ ನೀಡಿರುವುದು ವರದಿಯಾಗಿದೆ (ಪ್ರ.ವಾ., ಏ. 19). ಆಡಳಿತಾತ್ಮಕ ವಿಚಾರಗಳಲ್ಲೂ ಹೈಕೋರ್ಟ್ ನಿರ್ದೇಶನ ಮಾಡುವವರೆಗೂ ಸರ್ಕಾರ ಕಾಯಬೇಕೇ? ಕೋರ್ಟ್ನಿಂದ ನಿರ್ದೇಶನ ಪಡೆದು ಕೆಲಸ ಮಾಡುವುದಾದರೆ ಅದಕ್ಕೆ ಸರ್ಕಾರ ಏಕೆ ಬೇಕು? ಅಧಿಕಾರಿಗಳೇ ಮಾಡುತ್ತಾರೆ. ಕೋರ್ಟುಗಳು ಮಾಡುವ ಕೆಲಸ ಬೆಟ್ಟದಷ್ಟಿರುತ್ತದೆ. ಇಂತಹವುಗಳೆಡೆಗೂ ಗಮನ ಹರಿಸಬೇಕಾದ ಪರಿಸ್ಥಿತಿಯನ್ನು ಸರ್ಕಾರ ಒದಗಿಸಕೂಡದು.
ಕೇವಲ ಇದೊಂದೇ ಅಲ್ಲದೆ ವರ್ಗಾವಣೆ, ಪ್ರತಿಭಟನೆ, ಆರೋಗ್ಯ, ರಸ್ತೆ ದುರಸ್ತಿ, ಹವಾಮಾನ, ಸಾರಿಗೆ, ಅಬಕಾರಿ ಮುಂತಾದ ಅನೇಕ ವಿಷಯಗಳಲ್ಲಿ ಕೋರ್ಟ್ ಸ್ವಯಂಪ್ರೇರಿತವಾಗಿ ಸರ್ಕಾರಕ್ಕೆ ಸೂಚನೆ ನೀಡುತ್ತಾ ತನ್ನ ಚಾಟಿ ಬೀಸುತ್ತಿರುವುದನ್ನು ಗಮನಿಸಬಹುದು. ಅಷ್ಟರವರೆಗೂ ಸರ್ಕಾರ ಸುಮ್ಮನಿರದೆ ತನ್ನ ಕೆಲಸವನ್ನು ಮಾಡುವಂತಾಗಲಿ.
- ಪತ್ತಂಗಿ ಎಸ್. ಮುರಳಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.