ADVERTISEMENT

ಪ್ರತೀ ನಗರದಲ್ಲಿ ಪುಸ್ತಕಮಳಿಗೆ ಇರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಫೆಬ್ರುವರಿ 2020, 15:34 IST
Last Updated 7 ಫೆಬ್ರುವರಿ 2020, 15:34 IST

ಈಗ ಸದಾ ಕೇಳಿಬರುವ ಒಂದು ಚರ್ವಿತಚರ್ವಣ ಟೀಕೆ- ‘ಕನ್ನಡ ಪುಸ್ತಕ ಕೊಳ್ಳುವವರು, ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ’. ಆದರೆ ಎಷ್ಟೋ ತಾಲ್ಲೂಕು ಕೇಂದ್ರಗಳಲ್ಲಿ ಕತೆ, ಕಾದಂಬರಿ, ಕವನದ ಪುಸ್ತಕ ಕೊಳ್ಳಲು ಓದುಗನಿಗೆ ಪುಸ್ತಕಮಳಿಗೆಯೇ ಇರುವುದಿಲ್ಲ.

ಸಮಯ ಕಳೆಯಲು, ತೋರಿಸಿದ ದೃಶ್ಯಗಳನ್ನೇ ಮತ್ತೆ ಮತ್ತೆ ತೋರಿಸುವ ಟಿ.ವಿ ವಾಹಿನಿಗಳಿಗೆ ಪುಸ್ತಕ ಸಂಸ್ಕೃತಿ ಬೆಳೆಸುವುದಕ್ಕಾಗಿ ಕಾಲು ಗಂಟೆಯನ್ನಾದರೂ ಮೀಸಲಿಡುವಷ್ಟು ಕನ್ನಡ ಪ್ರೀತಿ ಇಲ್ಲ. ಈ ವಿಷಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಸಕ್ತಿ ವಹಿಸಿ, ರಾಜ್ಯದಾದ್ಯಂತ ತನ್ನ ಕಚೇರಿ ಇರುವ ಊರುಗಳಲ್ಲಿ ಪುಸ್ತಕ ಮಾರುವ ವ್ಯವಸ್ಥೆ ಮಾಡಿದರೆ ಕನ್ನಡ ಪುಸ್ತಕಗಳ ಮಾರಾಟಕ್ಕೆ ಒಂದು ವೇದಿಕೆ ಸಿಕ್ಕೀತು. ಇಂತಹ ಉಪಯುಕ್ತ ಕೆಲಸಗಳನ್ನು ಮಾಡಲು ಇನ್ನು ಮುಂದಾದರೂ ಆಸಕ್ತಿ ವಹಿಸಿದರೆ ಮತ್ತು ಸಾಹಿತ್ಯ ಸಮ್ಮೇಳನ ಅಂಗೀಕರಿಸುವ ನಿರ್ಣಯಗಳಲ್ಲಿ ಕೆಲವನ್ನಾದರೂ ಕಾರ್ಯಗತ ಮಾಡಲು ಪರಿಷತ್ ಇಚ್ಛಾಶಕ್ತಿಯನ್ನು ತೋರಿಸಿದರೆ, ಕನ್ನಡವನ್ನು ಉಳಿಸಿ– ಬೆಳೆಸುವ ಕಾರ್ಯದಲ್ಲಿ ಅದೊಂದು ಮಹತ್ವದ ಕ್ರಮ ಆದೀತು.

ಸತ್ಯಬೋಧ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.