ನಾನೊಬ್ಬ ಶ್ರೀಸಾಮಾನ್ಯ. ನಿವೃತ್ತ ಸರ್ಕಾರಿ ನೌಕರ. ನನಗೆ ಸ್ವಂತ ಜಮೀನು, ತೋಟ, ಗದ್ದೆ ಮಾಡಬೇಕೆಂಬ ಆಸೆ. ನನ್ನ ಪೂರ್ವಜರಾರೂ ರೈತಾಪಿಗಳಲ್ಲ. ಸದ್ಯದ ಭೂ ಕಾಯ್ದೆಯ ಪ್ರಕಾರ, ಒಬ್ಬ ವ್ಯಕ್ತಿ ಹೊಸದಾಗಿ ಕೃಷಿ ಜಮೀನು ಕೊಳ್ಳಬೇಕಾದರೆ ಆತ ಅಥವಾ ಅವನ ಕುಟುಂಬದವರೊಬ್ಬರು ಕೃಷಿಕರಾಗಿರಬೇಕೆಂಬುದು ಕಡ್ಡಾಯ. ಹಾಗಿಲ್ಲದ ಪಕ್ಷದಲ್ಲಿ ಅಂತಹ ವ್ಯಕ್ತಿ ವ್ಯವಸಾಯ ಮಾಡಲು ಅಥವಾ ಕೃಷಿಕರಿಂದ ಜಮೀನು ಖರೀದಿಸಲು ಕಾನೂನಿನಲ್ಲಿ ಅವಕಾಶ ಇಲ್ಲ.
ಹಾಲಿ ಕಾನೂನಿನ ಯಾವುದೇ ಅರಿವಿಲ್ಲದ ನನ್ನ ಸ್ನೇಹಿತನೊಬ್ಬ ಹೊಸದಾಗಿ ಕೃಷಿ ಮಾಡಲು ಹೋಗಿ, ಎಲ್ಲಾ ಇಲಾಖೆಗಳಲ್ಲಿ ಲಂಚ ಕೊಟ್ಟರೂ ಜಮೀನು, ತೋಟ ಆತನ ಹೆಸರಿಗೆ ಆಗದೆ ಮಾನಸಿಕ ತೊಳಲಾಟ, ಒತ್ತಡಕ್ಕೆ ಸಿಲುಕಿ ಹೃದಯಾಘಾತಕ್ಕೊಳಗಾದ. ವಸ್ತುಸ್ಥಿತಿ ಹೀಗಿರುವಾಗ, ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದು ಸ್ವಾಗತಾರ್ಹ.
-ಸಿಹಿಮೊಗೆ ರಮೇಶ್, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.