ADVERTISEMENT

ಪಾಕ್ ಪ್ರತೀಕಾರ ಕಡೆಗಣಿಸಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 18:13 IST
Last Updated 11 ಆಗಸ್ಟ್ 2019, 18:13 IST

ಭಾರತ– ಪಾಕ್‌ ನಡುವಿನ ರೈಲು ಸಂಚಾರಕ್ಕೆ ತಡೆ ಒಡ್ಡುವುದರಿಂದ, ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನುಸ್ಥಗಿತಗೊಳಿಸುವುದರಿಂದ ಪಾಕಿಸ್ತಾನಕ್ಕೆ ಏನೂ ಪ್ರಯೋಜನವಾಗದು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬಂತಿದೆ ಹತಾಶ ಪಾಕಿಸ್ತಾನದ ಈ ಬಗೆಯ ಬೆದರಿಕೆ.

ನಮಗೆ ಬೇಕಿರುವುದು ನಮ್ಮಿಂದ ಕಿತ್ತುಕೊಂಡ ಕಾಶ್ಮೀರದ ಪ್ರದೇಶ ಹಾಗೂ ಅಲ್ಲಿ ನೆಲೆಸಿರುವ ನಮ್ಮ ಸಹೋದರಿ, ಸಹೋದರರ ಕ್ಷೇಮ. ಹೀಗಾಗಿ, ಪಾಕಿಸ್ತಾನದ ಬೆದರಿಕೆಗಳಿಗೆ ಜಗ್ಗದೆ, ಈ ಬಗೆಗಷ್ಟೇ ನಾವು ಯೋಚಿಸಬೇಕು.

ಕೆ.ಸದಾನಂದ ಶಾಸ್ತ್ರಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.