ದೇಶದ ಯುವಜನರ ಬೆಂಬಲದೊಂದಿಗೆ 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿ ಪಟ್ಟಕ್ಕೇರಿದಾಗ, ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಆ ಮಾತು ಒತ್ತಟ್ಟಿಗಿರಲಿ, ಸದ್ಯ ಇದ್ದ ಉದ್ಯೋಗಗಳಲ್ಲೇ ಈಗ ಲಕ್ಷಾಂತರ ಉದ್ಯೋಗಗಳು ನಷ್ಟವಾಗಿವೆ. ಪ್ರಧಾನಿಯತ್ತ ಆಸೆ ಕಂಗಳಿಂದ ನೋಡುತ್ತಿದ್ದ ಯುವಜನ, ಕೆಲಸ ಕೊಡಿ ಎಂದು ಟ್ವೀಟ್ ಮಾಡಿ ದುಂಬಾಲು ಬೀಳುತ್ತಿರುವ ಸ್ಥಿತಿ ಕರುಣಾಜನಕವಾಗಿದೆ. ಆದರೆ ಪ್ರಧಾನಿ ಈ ಕುರಿತು ಯಾವುದೇ ಮಾತನಾಡದೆ ಮೌನ ವಹಿಸಿರುವುದು ಸರಿಯಲ್ಲ.
–ಪ್ರೊ. ಶಿವರಾಮಯ್ಯ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.