ADVERTISEMENT

ವಾಚಕರ ವಾಣಿ: ಅಭಿವೃದ್ಧಿ ನೀತಿ ಸ್ಥಾನಪಲ್ಲಟ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 19:30 IST
Last Updated 14 ಮಾರ್ಚ್ 2021, 19:30 IST

ಒಂದು ಕಾಲದಲ್ಲಿ ರಾಷ್ಟ್ರೀಕರಣ ಎಂಬುದು ಅಭಿವೃದ್ಧಿಯ ನೀತಿಯಾಗಿತ್ತು. ಈಗ ಖಾಸಗೀಕರಣ ಅಭಿವೃದ್ಧಿಯ ನೀತಿ ಎನಿಸುತ್ತಿದೆ. ಕಾಲ ಕಳೆದಂತೆ ಸರ್ಕಾರದ ನೀತಿಗಳು ಸ್ಥಾನಪಲ್ಲಟ ಆಗುತ್ತಿವೆ. ಎರಡು ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಮಾಡುವ ಸರ್ಕಾರದ ಉದ್ದೇಶ ಈ ಮಾತಿಗೆ ನಿದರ್ಶನವಾಗಿದೆ.

ಖಾಸಗೀಕರಣದಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತೆ ಶ್ರೀಮಂತರ ಸೊತ್ತಾಗಲಿವೆಯೇ ಎಂಬ ಅನುಮಾನ ಸಹಜವಾಗಿ ಉಂಟಾಗುತ್ತದೆ. ಹಾಗಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳ ಒಕ್ಕೂಟ ದೇಶದಾದ್ಯಂತ ಇದೇ 15 ಮತ್ತು 16ರಂದು ಎರಡು ದಿನಗಳ ಮುಷ್ಕರಕ್ಕೆ ಕರೆ ಕೊಟ್ಟಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

–ಡಾ. ಟಿ.ಪಿ.ಗಿರಡ್ಡಿ, ಜಮಖಂಡಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.