ADVERTISEMENT

ರಫೇಲ್‌ ಖರೀದಿ: ಭರವಸೆಗೂ, ಖಾತರಿಗೂ ವ್ಯತ್ಯಾಸ ಇಲ್ಲವೇ?

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 20:00 IST
Last Updated 16 ನವೆಂಬರ್ 2018, 20:00 IST

‘ರಫೇಲ್‌ ಖರೀದಿಗೆ ಸಂಬಂಧಿಸಿದಂತೆ ಫ್ರಾನ್ಸ್‌ ಸರ್ಕಾರ ಯಾವುದೇ ಖಾತರಿ ನೀಡಿಲ್ಲ, ಆದರೆ ಭರವಸೆ ಪತ್ರ ನೀಡಿದೆ, ಅದು ಸರ್ಕಾರದ ಖಾತರಿಗೆ ಸಮ’ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್‌ ಅವರು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ (ಪ್ರ.ವಾ., ನ. 15).

ಸರ್ಕಾರದ ತಪ್ಪು ನಡೆಯನ್ನು ವೇಣುಗೋಪಾಲ್‌ ಅವರು ಈ ರೀತಿ ಸಮರ್ಥಿಸಿಕೊಂಡಿರುವುದು ಸರಿಯಾದ ನಡೆಯಲ್ಲ. ‘ಖಾತರಿ’ ಮತ್ತು ‘ಭರವಸೆ’ಗೆ ವ್ಯತ್ಯಾಸ ಇಲ್ಲವೇ? ಎರಡೂ ಒಂದೇ ಎಂದು ನಿರ್ಧರಿಸಲು ಹೇಗೆ ಸಾಧ್ಯ? ಅಟಾರ್ನಿ ಜನರಲ್‌ ಅವರ ಈ ಹೇಳಿಕೆ ಬಾಲಿಶವೆನಿಸುತ್ತದೆ.

–ಪ್ರದೀಪ್ ಎಂ. ಚಿಕ್ಕಾಟಿ,ಗುಂಡ್ಲುಪೇಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.