ADVERTISEMENT

ಜನರ ವಿಶ್ವಾಸಕ್ಕೆ ಬಾಧಕ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 19:45 IST
Last Updated 30 ಆಗಸ್ಟ್ 2019, 19:45 IST

ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಪ್ರಕರಣದಿಂದ 10ನೇ ನ್ಯಾಯಮೂರ್ತಿ ಹಿಂದೆ ಸರಿದಿದ್ದಾರೆ(ಪ್ರ.ವಾ., ಆ. 30). ಶಾಸಕಾಂಗ ಹಾಗೂ ಕಾರ್ಯಾಂಗದ ಮೇಲೆ ಜನ ಈಗಾಗಲೇ ವಿಶ್ವಾಸ ಕಳೆದುಕೊಂಡಿದ್ದಾರೆ. ನಂಬಿಕೆ ಉಳಿದಿರುವುದು ನ್ಯಾಯಾಂಗದಲ್ಲಿ ಮಾತ್ರ.

ಆದರೆ, ಇತ್ತೀಚೆಗೆ ಅದಕ್ಕೂ ಬಾಧಕ ಆಗುತ್ತಿದೆ. ಈ ಹಿಂದೆ ಮಠಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದವು. ಇತ್ತೀಚೆಗೆ ಕೆಲವು ಮಠಗಳ ಸ್ವಾಮೀಜಿಗಳ ಆಡಂಬರದ ಜೀವನಶೈಲಿ ನೋಡಿದರೆ, ಇವರ‍್ಯಾರನ್ನೂ ನಾವು ಮಾದರಿಯಾಗಿ ಇಟ್ಟುಕೊಳ್ಳಬೇಕು ಎನಿಸುವುದಿಲ್ಲ.

- ಅಶೋಕ್‍ ಕುಮಾರ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.