ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಪ್ರಕರಣದಿಂದ 10ನೇ ನ್ಯಾಯಮೂರ್ತಿ ಹಿಂದೆ ಸರಿದಿದ್ದಾರೆ(ಪ್ರ.ವಾ., ಆ. 30). ಶಾಸಕಾಂಗ ಹಾಗೂ ಕಾರ್ಯಾಂಗದ ಮೇಲೆ ಜನ ಈಗಾಗಲೇ ವಿಶ್ವಾಸ ಕಳೆದುಕೊಂಡಿದ್ದಾರೆ. ನಂಬಿಕೆ ಉಳಿದಿರುವುದು ನ್ಯಾಯಾಂಗದಲ್ಲಿ ಮಾತ್ರ.
ಆದರೆ, ಇತ್ತೀಚೆಗೆ ಅದಕ್ಕೂ ಬಾಧಕ ಆಗುತ್ತಿದೆ. ಈ ಹಿಂದೆ ಮಠಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದವು. ಇತ್ತೀಚೆಗೆ ಕೆಲವು ಮಠಗಳ ಸ್ವಾಮೀಜಿಗಳ ಆಡಂಬರದ ಜೀವನಶೈಲಿ ನೋಡಿದರೆ, ಇವರ್ಯಾರನ್ನೂ ನಾವು ಮಾದರಿಯಾಗಿ ಇಟ್ಟುಕೊಳ್ಳಬೇಕು ಎನಿಸುವುದಿಲ್ಲ.
- ಅಶೋಕ್ ಕುಮಾರ್,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.