ADVERTISEMENT

ಯಾತ್ರೆಯ ಪ್ರಸ್ತಾಪ ಸರಿಯೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಸೆಪ್ಟೆಂಬರ್ 2022, 19:31 IST
Last Updated 16 ಸೆಪ್ಟೆಂಬರ್ 2022, 19:31 IST

‘ಕನ್ನಡ ಮನಸ್ಸುಗಳ ಜೋಡಣೆ ಯಾರ ಹೊಣೆ’ ಎಂಬ ಬರಹದಲ್ಲಿ ರಘುನಾಥ ಚ.ಹ. ಅತ್ಯಂತ ಪ್ರಸ್ತುತವಾದ ಮತ್ತು ಸಕಾಲಿಕವಾದ ಪ್ರಶ್ನೆಯೊಂದನ್ನು ಎತ್ತಿದ್ದಾರೆ ಮತ್ತು ಅದರಲ್ಲಿ ಅವರು ಪ್ರಸ್ತಾಪಿಸಿರುವ ಹಲವು ವಿಚಾರಗಳು ವಾಸ್ತವವಾಗಿವೆ. ಈಚಿನ ವರ್ಷಗಳಲ್ಲಿ ಬರಹಗಾರರಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಗುಂಪುಗಳಾಗಿರುವುದಷ್ಟೇಅಲ್ಲ, ಆ ಗುಂಪುಗಳು ಕೆಲವೊಮ್ಮೆ ಸಂವಾದ ನಡೆಸಲಾರದಷ್ಟು ವಿಂಗಡವಾಗಿಬಿಟ್ಟಿವೆಯೇನೋ ಎಂದು ಆತಂಕಪಡುವಂತೆ ಆಗಿರುವುದೂ ಸುಳ್ಳಲ್ಲ. ಇದಕ್ಕೆ ಜಾತಿ, ಸಿದ್ಧಾಂತ ಮತ್ತು ಪಕ್ಷ ರಾಜಕಾರಣಗಳತ್ತ ಅತಿಯಾದ ಒಲವು ತೋರುತ್ತ ಬಂದಿರುವ ಬರಹಗಾರರೇ ಕಾರಣರೆಂಬುದಕ್ಕೆ ಹೆಚ್ಚಿನ ಸಂಶೋಧನೆಯೇನೂ ಅಗತ್ಯವಿಲ್ಲ ಮತ್ತು ಅವರುಗಳೇ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಈಗ ಬಂದಿದೆ ಎನಿಸುತ್ತದೆ.

ಆದರೆ ಇಷ್ಟು ಒಳ್ಳೆಯ ಸಕಾಲಿಕವಾದ ಅವರ ಈ ಬರಹದಲ್ಲಿ, ಅದಕ್ಕೆ ಯಾವ ರೀತಿಯಲ್ಲಿಯೂ ಸಂಬಂಧವೇ ಇರದಿರುವ- ರಾಜಕೀಯ ಪಕ್ಷವೊಂದು ಮುಂದಿನ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ನಡೆಸುತ್ತಿರುವ ಯಾತ್ರೆಯೊಂದರ ಪ್ರಸ್ತಾಪ ಮಾಡಿರುವುದು ಪಾಯಸದಲ್ಲಿ ನೊಣ ಸಿಕ್ಕಿದಂತಾಗಿದೆ ಎಂದು ವಿಷಾದದಿಂದ ಹೇಳಬೇಕಾಗಿದೆ.

⇒ಆರ್.ಲಕ್ಷ್ಮೀನಾರಾಯಣ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.