ಓ ಈರುಳ್ಳಿ...
ಏನು ಹೇಳಲಿ ನಿನ್ನ ಮಹಾತ್ಮೆ
ಹಿಂದೆಲ್ಲಾ.... ಸಾಂಬಾರಿನಲ್ಲಿ
ನಿನ್ನ ನೋಡಿದರೆ ಬರುತ್ತಿತ್ತು ಬಾಯಲ್ಲಿ ನೀರು
ಹೆಚ್ಚುವಾಗ ಬರುತ್ತಿತ್ತು ಕಣ್ಣಲ್ಲಿ ನೀರು
ಆದರೆ... ಈಗ ನಿನ್ನನ್ನು ಕೊಳ್ಳುವಾಗಲೇ
ಹರಿಯುತ್ತಿದೆ ಕಣ್ಣಲ್ಲಿ ದಳದಳ ನೀರು...!
-ವಿ.ವಿಜಯೇಂದ್ರ ರಾವ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.