ADVERTISEMENT

ಮೂಲೋತ್ಪಾಟನೆ ಆಗಲಿ!

ಪ್ರಶಾಂತ ಎಂ ಕುನ್ನೂರ ಯಡ್ರಾಮಿ
Published 25 ಜೂನ್ 2018, 17:29 IST
Last Updated 25 ಜೂನ್ 2018, 17:29 IST

ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾದಾಗಿನಿಂದ ಉಗ್ರರ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿದೆ. ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ನಿಯೋಜನೆಯಿಂದ ಉಗ್ರಗಾಮಿಗಳು, ಪ್ರತ್ಯೇಕತಾವಾದಿಗಳು ಹಾಗೂ ಸೇನಾ ಪಡೆಗಳತ್ತ ಕಲ್ಲು ತೂರುತ್ತಿದ್ದವರು ಕುಳಿತಲ್ಲೆ ಬೆವರುತ್ತಿದ್ದಾರೆ.

ಇಲ್ಲಿಯವರೆಗೂ ಹೋರಾಟಗಾರರೆಂದು ಬಿಂಬಿಸಿಕೊಳ್ಳುತ್ತಿದ್ದ ಪ್ರತ್ಯೇಕತಾವಾದಿ ನಾಯಕರೆಲ್ಲಾ ಸಾಲು ಸಾಲಾಗಿ ಜೈಲು ಪಾಲಾಗುತ್ತಿದ್ದಾರೆ. ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು, ಈ ಮೂಲಕ ಭಾರತ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನೆಯಾದಂತಾಗಿದೆ.

ಏನೇ ಆಗಲಿ, ಕಾಶ್ಮೀರದಿಂದ ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು, ಕಲ್ಲು ತೂರಾಟ ನಡೆಸುವಂಥದೇಶದ್ರೋಹಿಗಳನ್ನು ಮೂಲೋತ್ಪಾಟನೆ ಮಾಡುವವರೆಗೂ ಭದ್ರತಾ ಪಡೆಗಳು ವಿಶ್ರಮಿಸದಿರಲಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.