ADVERTISEMENT

ವಾಚಕರ ವಾಣಿ | ಗೋಮಾಳ ಪರಭಾರೆ: ತನಿಖೆಗೆ ಅನುಮತಿ ಕೊಡಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 18 ಫೆಬ್ರುವರಿ 2022, 20:15 IST
Last Updated 18 ಫೆಬ್ರುವರಿ 2022, 20:15 IST

‘37 ಎಕರೆ ಗೋಮಾಳ ಪರಭಾರೆ; ಅಧಿಕಾರಿಗೆ ರಕ್ಷಣೆ’ (ಪ್ರ.ವಾ., ಫೆ. 18). ಅಧಿಕಾರಕ್ಕೆ ಬರುವ ಯಾವುದೇ ಪಕ್ಷ ತಮ್ಮದು ಭ್ರಷ್ಟಾಚಾರಮುಕ್ತ ಸರ್ಕಾರ ಎಂದು ಶಂಖನಾದ ಮಾಡುತ್ತಲೇ ಇರುತ್ತದೆ. ಆದರೆ, ಅದರ ವರ್ತನೆ ತದ್ವಿರುದ್ಧವಾಗಿರುತ್ತದೆ. ಅಂದಾಜು ₹ 200 ಕೋಟಿ ಮೌಲ್ಯದ 37 ಎಕರೆ ಗೋಮಾಳವನ್ನು ಪರಭಾರೆ ಮಾಡಿರುವ ಅಧಿಕಾರಿ ಕೆ.ರಂಗನಾಥ್ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿದ್ದ ಭ್ರಷ್ಟಾಚಾರ ನಿಗ್ರಹ ದಳದ ಪ್ರಸ್ತಾವವನ್ನು ರಾಜ್ಯ ಸರ್ಕಾರ ತಿರಸ್ಕರಿಸಿರುವುದುಇಬ್ಬಂದಿತನದ ದ್ಯೋತಕವಾಗಿದೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯ ಶಿಫಾರಸನ್ನೂ ಗಣನೆಗೆ ತೆಗೆದುಕೊಳ್ಳದ ಸರ್ಕಾರವು ಆರೋಪಿ ಅಧಿಕಾರಿಯ ತಲೆಕಾಯಲು ನಿಂತಿರುವುದು ನಿಜಕ್ಕೂ ದುರಂತವೇ ಸರಿ.

ಈ ಅಧಿಕಾರಿಯು ರಾಜ್ಯ ಸರ್ಕಾರವನ್ನೇ ಮಣಿಸುವಷ್ಟು ಪ್ರಭಾವಶಾಲಿಯೇ ಎಂಬ ಅನುಮಾನ ಹುಟ್ಟುತ್ತದೆ. ಸರ್ಕಾರ ತನ್ನ ನಿಲುವು ಬದಲಿಸಿಕೊಂಡು ತನಿಖೆಗೆ ಅನುಮತಿ ನೀಡುವುದರ ಮೂಲಕ ತನ್ನ ಘನತೆ ಉಳಿಸಿಕೊಳ್ಳಬೇಕಾಗಿದೆ. ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನಿಸಬೇಕಾಗಿದೆ.
‌‌‌‌‌
-ಮೋದೂರು ಮಹೇಶಾರಾಧ್ಯ,ಹುಣಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT