ADVERTISEMENT

ಅರವಟಿಗೆಗೆ ಅನುದಾನ ಮೀಸಲಿರಲಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 19:45 IST
Last Updated 8 ಏಪ್ರಿಲ್ 2020, 19:45 IST

ಬಿಸಿಲಿನ ಝಳಕ್ಕೆ ನದಿ ಮೂಲಗಳು ಬತ್ತಿರುವುದರಿಂದ, ಪ್ರಾಣಿ-ಪಕ್ಷಿಗಳಿಗೆ ನೀರಿನ ತೊಂದರೆ ಉಂಟಾಗಿದೆ. ಇದರಿಂದ ಅನೇಕ ವನ್ಯಜೀವಿಗಳು ಕಾಡಂಚಿನ ಗ್ರಾಮಗಳಿಗೆ ಬಂದಾಗ ನಡೆಯುವ ಮಾನವ– ಪ್ರಾಣಿ ಸಂಘರ್ಷದಲ್ಲಿ ಬಹುವಾಗಿ ವನ್ಯಜೀವಿಗಳು ಬಲಿಯಾಗುತ್ತವೆ. ಇದನ್ನು ತಡೆಯಲು ಅರಣ್ಯ ಇಲಾಖೆ ಸಿಬ್ಬಂದಿಯು ಕಾಡುಪ್ರಾಣಿಗಳಿಗೆ ಕಾಡಿನಲ್ಲಿಯೇ ನೀರು ಸಿಗುವಂತೆ ಮಾಡಲು ಸ್ವಂತ ಹಣದಿಂದ ನೀರಿನ ಅರವಟಿಗೆ ನಿರ್ಮಿಸುತ್ತಿರುವ ವರದಿ ಓದಿದೆ. ಇದು ಶ್ಲಾಘನೀಯ ಕಾರ್ಯ. ಆದರೆ ಈ ಕಾರ್ಯಕ್ಕೆ ಅರಣ್ಯ ಇಲಾಖೆಯೇ ಅನುದಾನ ಮೀಸಲಿಡುವಂತೆ ಆಗಬೇಕು.

- ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT