ಲಾಕ್ಡೌನ್ನಿಂದ ದೇಶದಾದ್ಯಂತ ಚಿನ್ನಾಭರಣ ಮಳಿಗೆಗಳು ಮುಚ್ಚಿದ್ದು, ಆಭರಣ ತಯಾರಕರು,ಕುಶಲಕರ್ಮಿಗಳು ಜೀವನ ನಡೆಸುವುದು ಕಷ್ಟವಾಗಿದೆ. ಆಭರಣ ತಯಾರಕರು ತಮ್ಮ ಕುಲಕಸುಬನ್ನು ಅವಲಂಬಿಸಿ ಜೀವನ ನಡೆಸುತ್ತಿರುತ್ತಾರೆ. ತಮ್ಮ ಬಳಿ ಹಣವಿಲ್ಲದೇ ಇರುವ ಈ ಸ್ಥಿತಿಯಲ್ಲಿ ಜನ ಚಿನ್ನಾಭರಣ ಕೊಳ್ಳುವರೇ? ಲಾಕ್ಡೌನ್ ಮುಗಿದ ಬಳಿಕವೂ ಸುಮಾರು ಎರಡು ತಿಂಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇರುತ್ತದೆ.
ಆಭರಣ ತಯಾರಕರ ಮಕ್ಕಳು ಕುಟುಂಬದ ವೃತ್ತಿಯನ್ನು ಮುಂದುವರಿಸಲು ಹಿಂದೇಟು ಹಾಕುತ್ತಿದ್ದು, ಸಾಂಸ್ಕೃತಿಕ ಹಿನ್ನಡೆಗೆ ಕಾರಣವಾಗುತ್ತಿದೆ. ಈ ನಡುವೆ, ಬೆಳ್ಳಿ ಬಂಗಾರದ ದರವೂ ಹೆಚ್ಚಾಗುತ್ತಿದೆ. ಇದರಿಂದ ನುರಿತ ಕುಶಲಕರ್ಮಿಗಳೇ ಕೈಕಟ್ಟಿ ಕುಳಿತಿದ್ದಾರೆ. ಜೊತೆಗೆ, ಬೇರೆ ವೃತ್ತಿಯನ್ನು ಆರಂಭಿಸಲು ಅವರು ಸೌಲಭ್ಯವಂಚಿತರಾಗಿದ್ದಾರೆ. ಇದನ್ನೆಲ್ಲ ಮನಗಂಡು, ಕುಶಲಕರ್ಮಿಗಳ ಬದುಕು ಮುಳುಗದಂತೆ ಸರ್ಕಾರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.
-ಹೇಮಲತಾ ಆಚಾರ್,ಹಿರಿಯೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.