ADVERTISEMENT

ಬಿಬಿಎಂಪಿ ಯಾರ ಹಿತ ಕಾಯುತ್ತಿದೆ?

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 19:50 IST
Last Updated 18 ಏಪ್ರಿಲ್ 2019, 19:50 IST

ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಬೇಸಿಗೆ ಮಳೆಯ ಸಂದರ್ಭದಲ್ಲಿ ಕಂಡುಬಂದ ಅವಾಂತರಗಳು ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಕೈಗನ್ನಡಿ. ಹಲವೆಡೆ ಮಳೆ ನೀರು ರಸ್ತೆಗಳಲ್ಲಿ ಮಿನಿ ಕೆರೆಗಳನ್ನು ಸೃಷ್ಟಿಸಿತ್ತು.

ಮೋರಿಗಳು ರಸ್ತೆಗಳ ಮೇಲೆ ಉಕ್ಕಿದ್ದರಿಂದ ವಾಹನ ಚಾಲಕರು ಪರದಾಡಿದರು. ಪಾದಚಾರಿಗಳಿಗೆ ಮಳೆ ನಡುಕದ ಜೊತೆಗೆ ಮರ ಬೀಳುವ, ವಿದ್ಯುತ್‌ ಆಘಾತಕ್ಕೆ ಒಳಗಾಗುವ ಆತಂಕ.

ರಾಜಧಾನಿಯಲ್ಲಿ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯ ವರ್ಷವಿಡೀ ನಡೆಯುವುದೇಕೆ? ವೈಟ್‌ ಟಾಪಿಂಗ್‌, ಮೆಟ್ರೊ, ಅಂಡರ್‌ಪಾಸ್‌, ಟೆಂಡರ್‌ಶ್ಯೂರ್‌, ಮೇಲ್ಸೇತುವೆ... ಹೀಗೆ ಒಂದಿಲ್ಲೊಂದು ಕಾಮಗಾರಿಗಳಿಂದಾಗಿ ನಿರಂತರ ನರಕ ದರ್ಶನ. ಬೇಸಿಗೆ ಮಳೆಗೇ ಹೀಗಾದರೆ ಇನ್ನು ಮುಂಗಾರು ಮಳೆಗೆ ನಾಗರಿಕರು ಎಂಥ ಕಷ್ಟಗಳನ್ನು ಅನುಭವಿಸಬೇಕಾಗಿ ಬರಬಹುದೋ. ಬಿಬಿಎಂಪಿ ಯಾರ ಹಿತ ಕಾಯುತ್ತಿದೆ?
-ಕಾಡನೂರು ರಾಮಶೇಷ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.