‘ಒಕ್ಕಲಿಗರನ್ನು ಗುರಿಯಾಗಿಸಿಕೊಂಡು ಮೋದಿ ಕೆಲಸ ಮಾಡುತ್ತಿದ್ದಾರೆ’- ಈ ಮಾತನ್ನು ಹೇಳಿದವರು ಯಾರೋ ರಾಜಕಾರಣಿಯಲ್ಲ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಎಂದು ಓದಿದಾಗ (ಪ್ರ.ವಾ, ಸೆ. 24) ಪರಮಾಶ್ಚರ್ಯವಾಯಿತು.
ಹಾಗಿದ್ದರೆ ಡಿ.ಕೆ.ಶಿವಕುಮಾರ್ ಅವರ ಅಕ್ರಮ ಸಂಪಾದನೆ ಆರೋಪದ ಬಗ್ಗೆ ತನಿಖೆ ನಡೆಯುತ್ತಿರುವುದು ಅವರು ಒಕ್ಕಲಿಗರೆಂದೋ ಅಥವಾ ಗಳಿಕೆ ಅಕ್ರಮ ಎಂಬ ಆರೋಪ ಹೊತ್ತಿರುವ ಕಾರಣಕ್ಕೋ. ಇಲ್ಲಿ ಆರೋಪಿಯ ಜಾತಿಯನ್ನು ಏಕೆ ಮುನ್ನೆಲೆಗೆ ತರಲಾಯಿತು ಎಂಬ ಪ್ರಶ್ನೆಗೆ ಹಿರಿಯರೂ, ಭ್ರಷ್ಟಾಚಾರ ವಿರೋಧಿಗಳೂ ಆದ ದೊರೆಸ್ವಾಮಿಯವರೇ ಉತ್ತರಿಸಬೇಕು.
-ಪ್ರೊ. ಎಂ.ಎಸ್.ರಘುನಾಥ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.