ADVERTISEMENT

ಅಪಸ್ವರ ಸಲ್ಲದು

ಕೆ.ಜೆ‌.ಬಸವರಾಜ್ ತುಮಕೂರು
Published 2 ಸೆಪ್ಟೆಂಬರ್ 2018, 18:44 IST
Last Updated 2 ಸೆಪ್ಟೆಂಬರ್ 2018, 18:44 IST

ಈ ಬಾರಿಯ ನಾಡಹಬ್ಬ ದಸರಾದ ಉದ್ಘಾಟನೆಗೆ ಸುಧಾ ಮೂರ್ತಿ ಅವರನ್ನು ಆಹ್ವಾನಿಸಿರುವುದಕ್ಕೆ ಕೆಲವರು ಅಪಸ್ವರ ಎತ್ತಿದ್ದಾರೆ.

ಸುಧಾ ಅವರು ಉದ್ಯಮಿಯಾಗಿದ್ದರೂ ಸರಳ ವ್ಯಕ್ತಿತ್ವದಮೂಲಕ ಜನಸಾಮಾನ್ಯರಲ್ಲಿ ಬೆರೆತು ಅವರ ಪ್ರೀತಿ– ವಿಶ್ವಾಸಗಳನ್ನು ಗಳಿಸಿಕೊಂಡಿದ್ದಾರೆ. ಸುಧಾ ಮೂರ್ತಿ ಅವರನ್ನು ವಿರೋಧಿಸುತ್ತಿರುವವರು ತಮ್ಮ ವಿರೋಧಕ್ಕೆ ನೀಡುವ ಕಾರಣಗಳು ಸರಿಯೆನಿಸುವುದಿಲ್ಲ. ಪ್ರತಿ ಬಾರಿಯೂ ರಾಜಕಾರಣಿಗಳು ಅಥವಾ ಬೇರೆಬೇರೆ ಕ್ಷೇತ್ರದ ಗಣ್ಯರನ್ನು ಆಹ್ವಾನಿಸಿ ದಸರಾ ಹಬ್ಬವನ್ನು ಉದ್ಘಾಟಿಸಲಾಗುತ್ತದೆ. ಸುಧಾ ಅವರು ಜನಸಾಮಾನ್ಯರಂತೆ ಇರುವುದರಿಂದ ಅವರು ಉದ್ಘಾಟಿಸಿದರೆ ಸಾಮಾನ್ಯ ವ್ಯಕ್ತಿಗೆ ಅವಕಾಶ ಸಿಕ್ಕಿದಂಥ ಭಾವನೆ ಮೂಡುತ್ತದೆ. ಇದು ಒಳ್ಳೆಯ ಬೆಳವಣಿಗೆಯೇ.

ಆದರೆ ಒಂದು ವಿಚಾರ; ಈ ಬಾರಿ ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಸಾವಿರಾರು ಮಂದಿ ಸಂಕಷ್ಟಕ್ಕೆ ಒಳಗಾಗಿರುವುದರಿಂದ ಹಬ್ಬವನ್ನು ಸರಳವಾಗಿ‌ ಆಚರಿಸುವುದು ಸೂಕ್ತ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.