ನಾನು ಪ್ರಧಾನಿ ಮೋದಿ ಅವರ ಅಭಿಮಾನಿ. ಅವರಿಗೆ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿ ಬಂದಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಪರಿಸರದ ಬಗೆಗಿನ ಅವರ ಕಾಳಜಿ ಸ್ತುತ್ಯರ್ಹ. ಆದರೆ ಗಂಗಾ ನದಿ ನೀರನ್ನು ಶುದ್ಧೀಕರಿಸುವ ಉದ್ದೇಶದ ‘ನಮಾಮಿ ಗಂಗೆ’ ಯೋಜನೆಗೆ ಕೋಟಿಗಟ್ಟಲೆ ಸುರಿದರೂ ಗಂಗೆಯ ಸ್ಥಿತಿ ಸುಧಾರಣೆಯಾಗಿಲ್ಲ ಎಂಬುದು ನೋವಿನ ಸಂಗತಿ.
ಗಂಗೆಯ ಹರಿವು ನಿರಂತರ ಮತ್ತು ನಿರ್ಮಲ ಇರಬೇಕು ಎಂದು ಒತ್ತಾಯಿಸಿ 110 ದಿನಗಳ ಸತ್ಯಾಗ್ರಹ ನಡೆಸಿ ಕೊನೆಯುಸಿರೆಳೆದ ಸಾನಂದ ಸ್ವಾಮೀಜಿ ಹೋರಾಟಕ್ಕೂ ಬೆಲೆ ದೊರೆಯಲಿಲ್ಲ ಎಂಬುದು ನೋವಿನ ಸಂಗತಿ.
-ರಾಜೇಶ್ವರಿ ಮ.ಸಾಲಿಮಠ, ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.