ಹೊಸ ನಿಗಮ, ಪ್ರಾಧಿಕಾರಗಳ ರಚನೆಯ ಬಗ್ಗೆ ಪರ– ವಿರೋಧದ ಚರ್ಚೆಗಳು ನಡೆಯುತ್ತಿವೆ. ಓಲೈಕೆ ರಾಜಕೀಯವನ್ನು ನಿಲ್ಲಿಸಿ, ಬಹುತ್ವ ಭಾರತದ ಕೌಶಲಗಳನ್ನು ಕೇಂದ್ರೀಕರಿಸಿ ನಿಗಮ, ಪ್ರಾಧಿಕಾರಗಳನ್ನು ರಚಿಸಿದರೆ ಸಮಾಜಮುಖಿಯಾದೀತು. ಶರಣರ ಸದಾಶಯದ ಕಾಯಕ, ಕೌಶಲಗಳನ್ನು ಆಧರಿಸಿ ಪ್ರಾಧಿಕಾರ, ನಿಗಮಗಳನ್ನು ರಚಿಸುವಂತಾಗಲಿ.
ಪೌರಕಾರ್ಮಿಕರ ಪ್ರಾಧಿಕಾರ, ಕಾಷ್ಠಶಿಲ್ಪಿಗಳ ಅಭಿವೃದ್ಧಿ ನಿಗಮ, ಕೇಶ ವಿನ್ಯಾಸಕರ ಅಭಿವೃದ್ಧಿ ನಿಗಮ, ಕಟ್ಟಡ ಕಾರ್ಮಿಕರ ಪ್ರಾಧಿಕಾರ, ಗೌಳಿಗರ ಅಭಿವೃದ್ಧಿ ನಿಗಮ... ಹೀಗೆ ವೃತ್ತಿಕೌಶಲ ಹಾಗೂ ಶ್ರಮ ಆಧಾರಿತ ನಿಗಮ, ಪ್ರಾಧಿಕಾರ ರಚಿಸಿದರೆ ಜನಸಾಮಾನ್ಯರಿಗೆ ಹೆಚ್ಚು ಉಪಯುಕ್ತವಾಗುತ್ತದೆ.
-ಮಹಾದೇವ ಹಡಪದ ನಟುವರ,ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.