ಕೆಪಿಎಸ್ಸಿ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದ ಪತ್ರಿಕಾ ವರದಿಗಳನ್ನು ಓದಿದಾಗ, ಅಭ್ಯರ್ಥಿಗಳು ಎಷ್ಟು ಅಸಹಾಯಕರು ಎಂದೆನಿಸಿತು. ತಂದೆ ತಾಯಿ ‘ಇನ್ನು ನಿನ್ನ ಅಭ್ಯಾಸಕ್ಕೆ ನಮ್ಮಲ್ಲಿ ಹಣವಿಲ್ಲ ನಿಲ್ಲಿಸು’ ಎನ್ನುವರೇನೋ, ‘ಕೆಲವು ತಿಂಗಳಲ್ಲಿ ಅಧಿಸೂಚನೆ ಹೊರಡಿಸದಿದ್ದರೆ ನನ್ನ ವಯೋಮಿತಿ ಮೀರಿ ಹೋಗುವುದೇನೋ’ ಎಂಬಂತಹ ಪ್ರಶ್ನೆಗಳಿಗೆ ಉತ್ತರ ಸಿಗದೆ ಲಕ್ಷಾಂತರ ಮಂದಿ ತಳಮಳದಿಂದ ಜೀವನ ನಡೆಸುತ್ತಿದ್ದಾರೆ.
ಪಕ್ಕದ ಅನೇಕ ರಾಜ್ಯಗಳ ವಿದ್ಯಾರ್ಥಿಗಳು ಪ್ರತಿವರ್ಷ ಪರೀಕ್ಷೆ ಬರೆದು ಕೆಲಸ ಪಡೆಯುತ್ತಿದ್ದಾರೆ. ಆದರೆ ನಮಗೇಕೆ ಆ ಭಾಗ್ಯ ಇಲ್ಲ? ಇದಕ್ಕಿಂತ ದೊಡ್ಡ ದೌರ್ಭಾಗ್ಯವೆಂದರೆ, ಈ ನಮ್ಮ ಕಷ್ಟಗಳನ್ನು ಯಾರಿಗೆ ಮುಟ್ಟಿಸಬೇಕು, ಯಾರ ವಿರುದ್ಧ ಹೋರಾಡಬೇಕು ಎಂದು ತಿಳಿಯದಿರುವುದು.
- ಸುಪ್ರೀತಾ ಸಿ. ಹೆಬ್ಬೂರು,ತುಮಕೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.