ADVERTISEMENT

ಯುದ್ಧ, ಪ್ರೇಮ, ಚುನಾವಣೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 18:35 IST
Last Updated 14 ಏಪ್ರಿಲ್ 2019, 18:35 IST

ಯುದ್ಧ ಮತ್ತು ಪ್ರೇಮದಲ್ಲಿ ಎಲ್ಲವೂ ಸರಿ ಎಂಬ ಗಾದೆ ಮಾತಿನಲ್ಲಿ ಈಗ ‘ಚುನಾವಣೆ’ ಎಂಬ ಪದವನ್ನೂ ಸೇರಿಸಬಹುದಾಗಿದೆ. ಇಲ್ಲಿ ಗೆಲುವೇ ಮುಖ್ಯ. ಗೆಲುವಿನ ದಾರಿಗಳು ನಗಣ್ಯ.

ನಮ್ಮ ರಾಜಕೀಯ ನೇತಾರರ ಪ್ರಚಾರ ವೈಖರಿ, ಅವರು ಬಳಸುವ ಭಾಷೆ, ಕಾರುವ ದ್ವೇಷ, ಅಸೂಯೆ, ಅಧಿಕಾರ ದಾಹ ಹೇಳಿದಷ್ಟೂ ಅಸಹ್ಯಕರ. ಇವರು ಸಾರ್ವಜನಿಕ ಜೀವನದ ನ್ಯೆತಿಕ ನೆಲೆಗಟ್ಟನ್ನೇ ಹಾಳು ಮಾಡಿದ್ದಾರೆ.

ಜನರ ದಾರಿ ತಪ್ಪಿಸಿ, ಎಲ್ಲ ವಾಮ ಮಾರ್ಗಗಳನ್ನೂ ಬಳಸಿ ಗದ್ದುಗೆ ಏರಲು ಹವಣಿಸುತ್ತಿದ್ದಾರೆ. ತತ್ವವಿಲ್ಲದ ರಾಜಕೀಯ,ಏಳು ಮಹಾಪಾಪಗಳಲ್ಲಿ ಒಂದು ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ತಾತ್ವಿಕ ನಡೆ-ನುಡಿ ಇಂದು ಯಾರಿಗೆ ಬೇಕಾಗಿದೆ? ಈ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
-ವೆಂಕಟೇಶ ಮಾಚಕನೂರ, ಧಾರವಾಡ

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.