ಚುನಾವಣೆಗೂ ಮುನ್ನ ಅವರೆಂದರು
ಗೆಲ್ಲಿಸಿದರೆ ನನ್ನನ್ನು
ನಿಮ್ಮೂರಿಗೆ ಬರುವುವು
ಟಾಯ್ಲೆಟ್ಟು, ನೀರು, ರಸ್ತೆಗೆ ಟಾರು.
ಗೆದ್ದು ಗದ್ದುಗೆಯೇರಿ ತಿರುಗಿಯೂ
ನೋಡದವರ ಕೇಳಿದರೆ ಅನ್ನುವರು
ಹದಗೆಟ್ಟ ನಿಮ್ಮೂರ ರಸ್ತೆಯಲಿ
ಬರಲಾಗದು ನನ್ನ ಕಾರು.
- ರಾಘವೇಂದ್ರ ಈ. ಹೊರಬೈಲು,ಬಟ್ಲಹಳ್ಳಿ, ಚಿಂತಾಮಣಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.