ADVERTISEMENT

ಮಠಾಧೀಶರ ರಾಜಕೀಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 16:54 IST
Last Updated 3 ಜುಲೈ 2018, 16:54 IST

‘ಎಚ್‌ಡಿಕೆ ಸರ್ಕಾರ ಉರುಳಿಸಲು ಬಿಡುವುದಿಲ್ಲ’(ಪ್ರ.ವಾ., ಜೂನ್‌ 28) ಎಂಬ ಎಚ್ಚರಿಕೆಯನ್ನು ನಂಜಾವಧೂತ ಸ್ವಾಮೀಜಿ ನೀಡಿರುವುದು ಅಚ್ಚರಿ ಮೂಡಿಸಿದೆ.

ಕೆಲವು ದಿನಗಳ ಹಿಂದೆ ಮಾತೆ ಮಹಾದೇವಿ ಅವರು ‘ಕಾಂಗ್ರೆಸ್‌ಗೇ ಮತ ಹಾಕಿ’ ಎಂಬ ಫರ್ಮಾನು ಹೊರಡಿಸಿದ್ದರು. ಇವೆಲ್ಲವನ್ನೂ ನೋಡಿದರೆ ನಮ್ಮ ದೇಶದಲ್ಲಿ ‘ಮಠಾಧೀಶರ ಕೆಲಸವೇನು’ ಎಂಬ ಬಗ್ಗೆ ಚಿಂತಿಸಬೇಕಾದ ದಿನಗಳು ಬಂದಿವೆ ಎನಿಸುತ್ತಿದೆ.

ಎಲ್ಲ ಮಾನವರೂ ಸಮಾನರು, ಎಲ್ಲರೂ ಏಳಿಗೆ ಹೊಂದಬೇಕು, ಎಲ್ಲರಿಗೂ ಒಳಿತಾಗಬೇಕು ಎಂಬ
ಧ್ಯೇಯವನ್ನಿಟ್ಟುಕೊಂಡು ಸ್ವಾಮಿಗಳು ಮತ್ತು ಮಠಗಳು ಕೆಲಸ ಮಾಡಬೇಕು. ಧರ್ಮದ ಹಾದಿಯಲ್ಲಿ ನಡೆಯಲು ಅವರು ಜನರನ್ನು ಪ್ರೇರೇಪಿಸಬೇಕು ಎಂಬುದು ಜನರ ತಿಳಿವಳಿಕೆ.

ADVERTISEMENT

ಆದರೆ ಇತ್ತೀಚೆಗೆ ಕೆಲವು ಸ್ವಾಮಿಗಳು ರಾಜಕಾರಣದಲ್ಲಿ ಮೂಗು ತೂರಿಸಿ ಅವರ ಅನುಯಾಯಿಗಳಿಗೆ ಇಂತಹ ಪಕ್ಷಕ್ಕೇ ಮತ ಹಾಕಿ ಎಂದು ನಿರ್ದೇಶನ ನೀಡು
ವುದು, ತಮ್ಮ ಕುಲಬಾಂಧವರಿಗಷ್ಟೇ ಅಧಿಕಾರ ಸಿಗಬೇಕು ಎಂಬ ಕಾರಣಕ್ಕೆ ಇತರ ಪಕ್ಷದವರಿಗೆ ಎಚ್ಚರಿಕೆ ಅಥವಾ ಧಮಕಿಯನ್ನು ನೀಡುವುದು ಎಷ್ಟು ಸರಿ? ಇದರ ಬದಲು ಅವರು ಮಠವನ್ನು ತೊರೆದು ರಾಜಕಾರಣ ಮಾಡುವುದು ಒಳಿತಲ್ಲವೇ?

-ಡಾ. ಆರ್. ವಿಜಯಸಾರಥಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.