ಭೂತದ ಕೋಲ ನಡೆಸುವ ನರ್ತನಕಾರರಿಗೆ ಮಾಸಾಶನ ಮಂಜೂರು ಮಾಡಿರುವುದು ಅತ್ಯಂತ ಶ್ಲಾಘನೀಯ. ಅದೇ ರೀತಿ ಉತ್ತರ ಕರ್ನಾಟಕದ ವಿವಿಧ ದೇವಸ್ಥಾನಗಳಲ್ಲಿ ವರ್ಷಕ್ಕೊಮ್ಮೆಯೋ ಎರಡು ಬಾರಿಯೋ ಕಾರಣಿಕ ನುಡಿಯುವ ಗೊರವಪ್ಪಗಳಿದ್ದಾರೆ. ದೈವಾರಾಧನೆಯನ್ನೇ ತಮ್ಮ ಬದುಕಿನ ನೆಲೆಯಾಗಿಸಿಕೊಂಡ ಇಂತಹ ಗೊರವಪ್ಪ ಗಳಿಗೂ ಸರ್ಕಾರವು ಮಾಸಾಶನ ಮಂಜೂರು ಮಾಡಿ, ಅವರ ಬದುಕಿಗೆ ನೆಮ್ಮದಿ ಉಂಟು ಮಾಡಲು ಕ್ರಮ ಜರುಗಿಸಬೇಕು.
-ಡಾ. ಹನುಮಂತ ಪೂಜಾರ,ಗದಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.