ADVERTISEMENT

ವಾಚಕರ ವಾಣಿ | ಕೆಟ್ಟ ಕಣ್ಣು ಎಂಬುದಿಲ್ಲ...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 1 ಆಗಸ್ಟ್ 2022, 21:00 IST
Last Updated 1 ಆಗಸ್ಟ್ 2022, 21:00 IST

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಅನಾರೋಗ್ಯಕ್ಕೆ ಒಳಗಾಗಿರುವುದನ್ನು ನೆನೆದು ‘ಯಾರದೋ ಕೆಟ್ಟ ಕಣ್ಣು ಅವರ ಮೇಲೆ ಬಿದ್ದಿದೆ’ ಎಂದು ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರು ಸಭೆಯೊಂದರಲ್ಲಿ ಕಣ್ಣೀರಿಟ್ಟರು ಎಂದು ವರದಿಯಾಗಿದೆ (ಪ್ರ.ವಾ., ಆ. 1).ಕೆಟ್ಟ ಕಣ್ಣು ಬೀಳುವುದು, ದೃಷ್ಟಿ ತಗಲುವುದು, ದೃಷ್ಟಿ ತೆಗೆಯುವುದು... ಇಂಥವೆಲ್ಲ ಮೂಢ ನಂಬಿಕೆಗಳು.

ಪ್ರತಿಯೊಬ್ಬ ಭಾರತೀಯನೂ ವೈಚಾರಿಕತೆ, ವೈಜ್ಞಾನಿಕ ಮನೋಭಾವ ರೂಢಿಸಿಕೊಂಡು ಬದುಕಬೇಕು, ಬಾಳಬೇಕು ಎಂದು ನಮ್ಮ ಸಂವಿಧಾನದಲ್ಲಿ ಹೇಳಲಾಗಿದೆ. ಅದರಲ್ಲೂ ಜನನೇತಾರರಾದವರು ಹೀಗೆಲ್ಲ ಕಾರ್ಯಕಾರಣ ಸಂಬಂಧಗಳಿಗೆ ಹೊರತಾಗಿ ಆಲೋಚಿಸಬಾರದು.ಬಿಂಡಿಗನವಿಲೆ ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT