ADVERTISEMENT

ವಾಚಕರ ವಾಣಿ | ಎಸಿಬಿ ದಾಳಿ: ಅಖಿಲ ಭಾರತ ನಾಟಕ ಸಮ್ಮೇಳನ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ನವೆಂಬರ್ 2021, 20:30 IST
Last Updated 25 ನವೆಂಬರ್ 2021, 20:30 IST

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪವಿದ್ದ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ದಾಳಿಯಿಂದ ಕೋಟಿಗಟ್ಟಲೆ ಹಣ, ಆಸ್ತಿ ದಾಖಲೆ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಇದನ್ನು ನೋಡಿದರೆ ಅಖಿಲ ಭಾರತ ನಾಟಕ ಸಮ್ಮೇಳನದಂತೆ ಭಾಸವಾಗುತ್ತದೆ. ಯಾಕೆಂದರೆ ಕಳೆದ 40 ವರ್ಷಗಳಿಂದಲೂ ಈ ಬಗೆಯ ದಾಳಿಗಳನ್ನು ನೋಡಿ ಸಾಕಾಗಿದೆ. ದಾಳಿಯಾದ ಯಾವ ಅಧಿಕಾರಿಯನ್ನೂ ವಜಾ ಮಾಡಿಲ್ಲ, ಜೈಲಿಗೆ ಹಾಕಿಲ್ಲ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ. ಇಂತಹ ಅಧಿಕಾರಿಗಳು ಲಂಚ ನೀಡಿ ಪುನಃ ಕೆಲಸಕ್ಕೆ ಹಾಜರಾಗುವುದು ನಡೆದಿದೆ. ಈ ಹಿಂದೆ ಹೀಗೆ ಎಸಿಬಿ, ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಗಳ ಪಟ್ಟಿ, ಅವರಿಗಾದ ಶಿಕ್ಷೆಯನ್ನು ಸರ್ಕಾರ ಮೊದಲು ಪ್ರಕಟಿಸಲಿ.

-ಡಾ. ಎಚ್.ಆರ್.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.