ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪವಿದ್ದ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ದಾಳಿಯಿಂದ ಕೋಟಿಗಟ್ಟಲೆ ಹಣ, ಆಸ್ತಿ ದಾಖಲೆ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಇದನ್ನು ನೋಡಿದರೆ ಅಖಿಲ ಭಾರತ ನಾಟಕ ಸಮ್ಮೇಳನದಂತೆ ಭಾಸವಾಗುತ್ತದೆ. ಯಾಕೆಂದರೆ ಕಳೆದ 40 ವರ್ಷಗಳಿಂದಲೂ ಈ ಬಗೆಯ ದಾಳಿಗಳನ್ನು ನೋಡಿ ಸಾಕಾಗಿದೆ. ದಾಳಿಯಾದ ಯಾವ ಅಧಿಕಾರಿಯನ್ನೂ ವಜಾ ಮಾಡಿಲ್ಲ, ಜೈಲಿಗೆ ಹಾಕಿಲ್ಲ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ. ಇಂತಹ ಅಧಿಕಾರಿಗಳು ಲಂಚ ನೀಡಿ ಪುನಃ ಕೆಲಸಕ್ಕೆ ಹಾಜರಾಗುವುದು ನಡೆದಿದೆ. ಈ ಹಿಂದೆ ಹೀಗೆ ಎಸಿಬಿ, ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಗಳ ಪಟ್ಟಿ, ಅವರಿಗಾದ ಶಿಕ್ಷೆಯನ್ನು ಸರ್ಕಾರ ಮೊದಲು ಪ್ರಕಟಿಸಲಿ.
-ಡಾ. ಎಚ್.ಆರ್.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.