ADVERTISEMENT

ವಾಚಕರ ವಾಣಿ | ನಿಮ್ಮ ಮನೆಯವರೂ ಅಸಹ್ಯಪಟ್ಟಾರು.

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಫೆಬ್ರುವರಿ 2022, 20:30 IST
Last Updated 15 ಫೆಬ್ರುವರಿ 2022, 20:30 IST

ಸಮವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ ವಾದ ವಿವಾದಗಳಲ್ಲಿ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಬೇಕಾದ ನಮ್ಮ ಜನಪ್ರತಿನಿಧಿಗಳು, ಮಹಿಳೆಯರು ಧರಿಸುವ ತುಂಡುಡುಗೆಯಿಂದ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಖಂಡನೆ ವ್ಯಕ್ತವಾದಾಗ, ‘ನಮಗೆ ಹೆಣ್ಣು ಮಕ್ಕಳ ಮೇಲೆ ಗೌರವ ಇದೆ. ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎನ್ನುತ್ತಾರೆ.

ಸ್ವಾಮಿ ಪ್ರಜಾಪ್ರತಿನಿಧಿಗಳೇ, ಇಂತಹ ವಿವೇಚನಾರಹಿತ ಹೇಳಿಕೆಗಳಿಂದ ನಿಮ್ಮ ಮನೆಯ ಹೆಣ್ಣು ಮಕ್ಕಳೂ ನಿಮ್ಮ ಬಗ್ಗೆ ಅಸಹ್ಯ ಪಡಬಹುದೆಂಬ ಅರಿವಾದರೂ ಇರಲಿ.

- ಸುವರ್ಣ ಸಿ.ಡಿ.,ತರೀಕೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.