ADVERTISEMENT

ತೈಲ ಬೆಲೆ ಏರಿಕೆ: ಪ್ರತಿಕ್ರಿಯೆಯೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 19:31 IST
Last Updated 14 ಡಿಸೆಂಬರ್ 2020, 19:31 IST

ತೈಲದ ಬೆಲೆ ಗಗನಕ್ಕೇರುತ್ತಿದೆ. ವಿಶೇಷವೆಂದರೆ, ಈ ಏರಿಕೆ ಬಗೆಗೆ ಜನಸಾಮಾನ್ಯರು ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ಬರೀ ಕಂಠಶೋಷಣೆ ಎಂದು ಸುಮ್ಮನಿದ್ದಿರಬಹುದು. ರಾಜಕಾರಣಿಗಳ ಪೈಕಿ ಡಾ. ಸುಬ್ರಮಣಿಯನ್‌ ಸ್ವಾಮಿ ಒಬ್ಬರನ್ನು ಬಿಟ್ಟರೆ ಬಹುಶಃ ಬೇರೆ ಯಾರೂ ಪ್ರತಿಕ್ರಿಯಿಸಿಲ್ಲ.

ಹಿಂದೆ ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರ ಇದ್ದಾಗ, ತೈಲದ ಬೆಲೆ ಏರಿದಾಗಲೆಲ್ಲಾ ಗಲ್ಲಿ ಗಲ್ಲಿಯಲ್ಲಿ, ವೃತ್ತದಲ್ಲಿ ಪ್ರತಿಭಟನೆ ಮಾಡುತ್ತಿದ್ದವರು ಈಗ ಜಾಣಮೌನ ವಹಿಸಿದ್ದಾರೆ. ಜನ ಮೌನವಾಗಿ ಶಪಿಸುತ್ತಾ ಏರಿಕೆಗೆ ಹೊಂದಿಕೊಳ್ಳುತ್ತಿದ್ದಾರೆ. ಪತ್ರಿಕಾ ಮಾಧ್ಯಮದವರು ಈ ಸುದ್ದಿಯನ್ನು ಒಳಪುಟಕ್ಕೆ ಸರಿಸುತ್ತಿದ್ದಾರೆ!

–ರಮಾನಂದ ಶರ್ಮಾ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.