ADVERTISEMENT

ವಾಚಕರ ವಾಣಿ: ಇದೆಂಥಾ ಅಭಿವೃದ್ಧಿ ಸ್ವಾಮಿ?

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 16:22 IST
Last Updated 5 ಜನವರಿ 2021, 16:22 IST

ಬೆಂಗಳೂರಿನಲ್ಲಿ ಅಭಿವೃದ್ಧಿಗೊಂಡ ರಸ್ತೆಗಳ ಮರು ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವ ಕುರಿತ ವರದಿ (ಪ್ರ.ವಾ., ಜ. 4) ವಿಸ್ಮಯವನ್ನು ಉಂಟುಮಾಡುತ್ತದೆ. ಹನ್ನೆರಡು ಕಾರಿಡಾರ್‌ಗಳ ಪ್ರಾರಂಭಿಕ ಹಂತದ ಅಭಿವೃದ್ಧಿಗೆ ₹ 335.17 ಕೋಟಿ, ಇವುಗಳ ನಿರ್ವಹಣೆಗೆ ವಾರ್ಷಿಕವಾಗಿ ₹ 142.12 ಕೋಟಿ ವೆಚ್ಚವಾಗಲಿದೆ! ಇದೆಂಥಾ ಅಭಿವೃದ್ಧಿ ಸ್ವಾಮಿ? ಚೆನ್ನಾಗಿರುವ ರಸ್ತೆಗಳಿಗೇ ಮತ್ತೆ ವೆಚ್ಚ ಮಾಡುವ ಅಗತ್ಯವೇನು ಎಂದು ಮಾಜಿ ಮೇಯರ್ ಒಬ್ಬರು ಪ್ರಶ್ನಿಸಿದ್ದಾರೆ.

ಸರ್ಕಾರದಲ್ಲಿ ಏನು ನಡೆಯುತ್ತಿದೆ? ಯಾಕೆ ‘ಆ ಏನು’ ನಡೆಯುತ್ತಿದೆ ಎನ್ನುವುದನ್ನು ಕೇಳುವವರು ಇಲ್ಲವೋ ಹೇಗೆ? ಚೆನ್ನಾಗಿ ಇರುವುದನ್ನು ಹಾಳುಮಾಡಿ ಅಭಿವೃದ್ಧಿ ನೆಪದಲ್ಲಿ ಕಾಮಗಾರಿಗೆ ಮುಂದಾಗುವುದು ಅದೆಂಥ ಆಡಳಿತ ವೈಖರಿಯೋ ಗೊತ್ತಾಗದು. ನಾಗರಿಕ ಸಂಸ್ಥೆಗಳು ಈ ಮರು ಅಭಿವೃದ್ಧಿಯ ಹಂಬಲವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು. ಇಂಥವೆಲ್ಲ ಹಣದ ಅಪವ್ಯಯದ ಮಾದರಿಗಳು.

-ಸಾಮಗ ದತ್ತಾತ್ರಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.