ADVERTISEMENT

ದೇವರಿಗೆ ಭೇದವಿಲ್ಲ!

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 20:01 IST
Last Updated 23 ಅಕ್ಟೋಬರ್ 2018, 20:01 IST

ಶಬರಿಮಲೆಗೆ ಮಹಿಳೆಯರು ಹೋಗಲು ಇದ್ದ ನಿರ್ಬಂಧವನ್ನು ತೆಗೆದುಹಾಕಿದ ಕೋರ್ಟ್‌ ತೀರ್ಪಿಗೆ ವಿರೋಧವನ್ನು ವ್ಯಕ್ತಪಡಿಸುವ ನಮ್ಮ ಜನರ ಮನೋಭಾವ ನಿಜಕ್ಕೂ ಶೋಚನೀಯ.

ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಸಂಕುಚಿತ ಮನೋಭಾವದ ಚೌಕಟ್ಟಿನಿಂದ ಹೊರಗೆ ಬಂದಂತಿಲ್ಲ. ದೇವರಿಗೆ ಸ್ತ್ರೀ– ಪುರುಷ ಎಂಬ ಭೇದ ಭಾವ ಇರಲು ಹೇಗೆ ಸಾಧ್ಯ?

ನಮ್ಮ ಜನರು, ಸಂಪ್ರದಾಯದ ಹೆಸರಿನಲ್ಲಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ದೇವಾಲಯಕ್ಕೆ ಸ್ವಇಚ್ಛೆಯಿಂದ ಹೋಗಲು ಮುಂದಾದ ಮಹಿಳೆಯರಿಗೆ ಅವಕಾಶ ಕೊಡಬೇಕು. ತೀರ್ಪನ್ನು ಸ್ವಾಗತಿಸಬೇಕು.

ADVERTISEMENT

–ಲಲಿತಾ, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.