ಕೇಂದ್ರ ಸರ್ಕಾರವು 2015ರಲ್ಲಿ ದೇಶದಾದ್ಯಂತ 600 ‘ಸಖೀ ಒನ್ ಸ್ಟಾಪ್ ಸೆಂಟರ್’ ಎಂಬ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಲು ಮುಂದಾಯಿತು. ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಒಂದೇ ಸೂರಿನಡಿ ವೈದ್ಯಕೀಯ ಮತ್ತು ಕಾನೂನು ಸಹಾಯ ನೀಡುವುದು ಇದರ ಉದ್ದೇಶ.
ನಮ್ಮ ರಾಜ್ಯದಲ್ಲಿ ನಾಲ್ಕು ವರ್ಷ ಕಳೆದರೂ ಉಡುಪಿ ಜಿಲ್ಲೆಯನ್ನು ಹೊರತುಪಡಿಸಿ ಬೇರೆ ಯಾವ ಜಿಲ್ಲೆಯಲ್ಲೂ ‘ಸಖೀ’ ಕೇಂದ್ರ ಆರಂಭಗೊಂಡಿಲ್ಲ. ಸಂಬಂಧಪಟ್ಟವರು ಇತ್ತ ಗಮನ ನೀಡುವರೇ? ಅಥವಾ ಇದಕ್ಕೂ ಕೋರ್ಟ್ನಿಂದ ಆದೇಶ ತರಬೇಕೇ?
–ಅನಿತಾ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.