ತನಗೆ ಲೈಂಗಿಕ ಕಿರುಕುಳ ನೀಡಿದ ಯುವಕನನ್ನು ಯುವತಿಯೇ ಸ್ಥಳೀಯರೊಂದಿಗೆ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವುದನ್ನು (ಪ್ರ.ವಾ., ಏ. 28) ತಿಳಿದು ಸಂತೋಷವಾಯಿತು. ಪ್ರತೀ ಯುವತಿಯೂ ಹೀಗೆ ಧೈರ್ಯದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಹೀಗೆ ಒಮ್ಮೆ ಧೈರ್ಯ ಮಾಡಿ ಹಿಡಿದರೆ, ಆತ ಇನ್ನೊಮ್ಮೆ ಅಂತಹ ಪ್ರಯತ್ನಕ್ಕೆ ಕೈ ಹಾಕುವ ಸಾಧ್ಯತೆ ಕಡಿಮೆ. ದಾರಿಹೋಕರೂ ಮಹಿಳೆಯರ ಸಹಾಯಕ್ಕೆ ಬಂದೇ ಬರುತ್ತಾರೆ. ಧೈರ್ಯವು ಎಲ್ಲಕ್ಕೂ ಸಾಧನ ಎಂಬ ಮಾತನ್ನು ಮಹಿಳೆಯರು ಮರೆಯಬಾರದು.
-ಬಾಲಕೃಷ್ಣ ಎಂ.ಆರ್., ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.