ADVERTISEMENT

ವಾಚಕರ ವಾಣಿ | ಮಕ್ಕಳ ಮನಃಸ್ಥಿತಿ ಅರಿಯಿರಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 18:45 IST
Last Updated 7 ಆಗಸ್ಟ್ 2020, 18:45 IST
   

ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಇನ್ನೇನು ಹೊರಬೀಳಲಿದೆ. ಚೆನ್ನಾಗಿ ಪರೀಕ್ಷೆ ಬರೆದಿದ್ದವರಿಗೆ ತಾವೆಷ್ಟು ಅಂಕ ಪಡೆಯಬಹುದು ಎಂಬ ಕುತೂಹಲ ಇರುತ್ತದೆ. ಯಾವುದೋ ಕಾರಣದಿಂದ ಪರೀಕ್ಷೆಯನ್ನು ಚೆನ್ನಾಗಿ ಬರೆಯದ ಮಕ್ಕಳಲ್ಲಿ ಸಹಜವಾಗಿಯೇ ಆತಂಕ ಇರುತ್ತದೆ. ಆ ಆತಂಕ ನಿವಾರಿಸಲು ಮನೆಯವರು ಮುತುವರ್ಜಿ ವಹಿಸಬೇಕು.

ಮಾಧ್ಯಮಗಳು ಉತ್ತಮ ಫಲಿತಾಂಶ ಪಡೆದ ಮಕ್ಕಳನ್ನು ವೈಭವೀಕರಿಸುತ್ತವೆ. ಪೋಷಕರಂತೂ ತಮ್ಮ ಮಕ್ಕಳನ್ನು ಬೇರೆ ಮಕ್ಕಳ ಜೊತೆ ಹೋಲಿಕೆ ಮಾಡಿ ಪರಾಮರ್ಶಿಸುತ್ತಾರೆ. ಇದರಿಂದ ಇಂತಹ ಕೆಲವು ಮಕ್ಕಳು ಹತಾಶ ಸ್ಥಿತಿಗೆ ತಲುಪುವುದೂ ಇದೆ. ಉತ್ತಮ ಫಲಿತಾಂಶ ಪಡೆದ ಮಕ್ಕಳನ್ನು ಪ್ರಶಂಸಿಸಬೇಕು ಸರಿ. ಆದರೆ, ಕಡಿಮೆ ಅಂಕ ಪಡೆದ ಮಕ್ಕಳ ಮನಃಸ್ಥಿತಿಯನ್ನೂ ನಾವು ಅರಿಯಬೇಕಾಗುತ್ತದೆ. ಮುಂದೆಯೂ ಅವಕಾಶಗಳು ಇದ್ದೇ ಇರುತ್ತವೆ ಎಂಬ ವಾಸ್ತವವನ್ನು ಅವರಿಗೆ ಮನದಟ್ಟು ಮಾಡಿಸಬೇಕಾದುದು ಅತ್ಯಗತ್ಯ.

-ಎಚ್.ಚಂದ್ರಪ್ಪ ನೀಲಗುಂದ, ದೊಗ್ಗಳ್ಳಿ, ಹರಿಹರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.