ADVERTISEMENT

ಸುಳ್ವಾಡಿ ದುರಂತದಿಂದ ಅನಾಥರಾದ ಮಕ್ಕಳ ದತ್ತು: ಮಾನವೀಯತೆಯ ಸೆಲೆ!

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 20:00 IST
Last Updated 27 ಡಿಸೆಂಬರ್ 2018, 20:00 IST

ಸುಳ್ವಾಡಿ ದೇವಾಲಯದಲ್ಲಿ ವಿಷಯುಕ್ತ ಪ್ರಸಾದ ಸೇವಿಸಿ 17 ಮಂದಿ ಮುಗ್ಧರು ಪ್ರಾಣ ಬಿಟ್ಟಿರುವ ಸುದ್ದಿ ಓದಿ ದುಃಖವಾದದ್ದಷ್ಟೇ ಅಲ್ಲ, ಕ್ರೌರ್ಯ ಮೆರೆದವರ ವಿರುದ್ಧ ಆಕ್ರೋಶವೂ ಮೂಡಿತ್ತು.

ಆದರೆ, ಘಟನೆಯಲ್ಲಿ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾದ ಮೂವರು ಮಕ್ಕಳಿಗೆ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ದತ್ತು ಪಡೆಯಲು ಮುಂದಾಗಿರುವ ಸುದ್ದಿ ಓದಿ ಸಂತಸವಾಯಿತು. ಮಾನವೀಯತೆಯ ಸೆಲೆ ಪೂರ್ಣ ಬತ್ತಿಲ್ಲ ಎಂಬ ಭರವಸೆ ಮೂಡಿತು.

–ಕೇಶವಪ್ರಭು, ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.