ಸಂಸದೆ ಸುಮಲತಾ ಅಂಬರೀಷ್ ಅವರು ಚುನಾವಣೆಗೆ ನಿಂತಾಗ ಯಾರೋ ಅವರನ್ನು ‘ಮಾಯಾಂಗನೆ’ ಎಂದು ಟೀಕಿಸಿದರು. ಆ ಮಾತು ಮುಂದೆ ನಿಜವೇ ಆಯಿತು.
ಮತಗಳ ಎಣಿಕೆ ಸಂದರ್ಭದಲ್ಲಿ ‘ಸೋಲು ನಿಶ್ಚಿತ’ ಎಂಬ ಭಾವನೆಯನ್ನು ಅಡಿಗಡಿಗೂ ಮೂಡಿಸಿದ ಸುಮಲತಾ ಕಡೆಗೆ ‘ನಿಖಿಲ’ ಕರ್ಣಾಟಕವೆ ನಿಬ್ಬೆರಗಾಗುವಂತೆ ವಿಜಯ (ಸುಮ) ಮಾಲೆಯನ್ನು ಧರಿಸಿದ್ದು, ‘ಮಾಯೆ’ಯಲ್ಲವೆ?ಅವರು ‘ಮಾಯಾಂಗನೆ’ಯೇ ಸರಿ!ಅಂತೂ ಉತ್ತರದಲ್ಲೊಬ್ಬರು ಮಾಯಾವತಿ, ದಕ್ಷಿಣದಲ್ಲೊಬ್ಬರು ಮಾಯಾಂಗನೆ– ಇದೀಗ ಭಾರತ ಸ್ವಾರಸ್ಯ! (ಪೂರ್ವ ಪಶ್ಚಿಮಗಳ ವಿಷಯ ನಮಗೆ ತಿಳಿಯದು).
–ಸಿ.ಪಿ.ಕೆ.,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.