ADVERTISEMENT

ಇವರ ಋಣ ತೀರಿಸಬೇಕೆಂದರೆ...

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 15:23 IST
Last Updated 7 ಏಪ್ರಿಲ್ 2020, 15:23 IST

ಲಾಕ್‌ಡೌನ್‌ನಿಂದಾಗಿ ರಾಜ್ಯಕ್ಕೆ ಈಗ ಯಾವ ಮೂಲದಿಂದಲೂ ವರಮಾನವಿಲ್ಲದೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ, ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ಕಡಿತ ಮಾಡಬೇಕಾಗಿ ಬರಬಹುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಇದು ಅನಿವಾರ್ಯವಾದ ಕ್ರಮ. ಆದರೆ ಪ್ರಸ್ತುತ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು... ಇಂಥವರೆಲ್ಲ ಹಗಲು-ರಾತ್ರಿ ಎನ್ನದೆ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕೊರೊನಾ ವೈರಸ್‌ ವಿರುದ್ಧ ನಾಗರಿಕರ ರಕ್ಷಣೆಗಾಗಿ ಪಣತೊಟ್ಟು ಶ್ರಮಿಸುತ್ತಿದ್ದಾರೆ. ಅಂತಹವರ ವೇತನವನ್ನು ಕಡಿತ ಮಾಡಬಾರದು. ಅವರ ಋಣವನ್ನು ಈ ರೀತಿ ಮಾತ್ರ ತೀರಿಸಲು ಸಾಧ್ಯ.

ಮುರುಗೇಶ ಡಿ.,ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.