ಬಂಧುಗಳೊಡನೆ ಪ್ರಯಾಣ ಸಾಧ್ಯತೆ, ಆಸ್ತಿ ವಿವಾದಕ್ಕಾಗಿ ನ್ಯಾಯಲಯದ ಮೊರೆ, ವಸ್ತ್ರಾಭರಣಗಳನ್ನು ಖರೀದಿ ಸುವ ಸಾಧ್ಯತೆ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ... ಇವು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ದಿನಭವಿಷ್ಯದ ಮಾದರಿಗಳು! ಈಗ ಎಲ್ಲರ ದಿನಭವಿಷ್ಯ ಒಂದೇ... ಅದು ಕೊರೊನಾ ವೈರಸ್ನಿಂದ ಪಾರಾಗುವುದಕ್ಕೆ ಉಪಾಯ ಹುಡುಕುವ ಬಗೆ. ರಾಹು, ಕೇತು ನಕ್ಷತ್ರ, ಹೋಮ, ಪೂಜೆ, ಗಳಿಗೆ... ಇಲ್ಲದೆ ಹೊರಗೆ ಕಾಲಿಡದ ಮುಗ್ಧಜನರನ್ನು ವಂಚಿಸುವ ಜ್ಯೋತಿಷಿಗಳ ಇಂತಹ ಭವಿಷ್ಯ ಪ್ರಶ್ನಾರ್ಹ ಮತ್ತು ಹಾಸ್ಯಾಸ್ಪದವಾಗಿದೆ.
ವಿನ್ಸೆಂಟ್ ಪಿಂಟೊ, ಮಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.